ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ವೈದ್ಯರ ವರ್ಗಾವಣೆಗೆ ರಾಜ್ಯ ಸರಕಾರ ಮುಂದಾಗಿದ್ದು ಇದು ಉತ್ತರಕನ್ನಡಕ್ಕೆ ಮಾರಕ ಉಂಟಾಗುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಒಂದೇ ಒಂದು ಸುಸಜ್ಜಿತ ಆಸ್ಪತ್ರೆ ಇಲ್ಲ ಎಂದು ಹೋರಾಟಗಳು ನಡೆಯುತ್ತಿದೆ. ಈ ನಡುವೆ ಇದೀಗ ಸದ್ಯ ಸರಕಾರಿ ಆಸ್ಪತ್ರೆಯಲ್ಲಿ ಒಳ್ಳೆಯ ಸೇವೆ ನೀಡುತ್ತಿರುವ ವೈದ್ಯರನ್ನ ವರ್ಗಾವಣೆ ಮಾಡಿದರೆ ಜಿಲ್ಲೆಯ ಜನತೆ ವೈದ್ಯಕೀಯ ಚಿಕಿತ್ಸೆಗಾಗಿ ಇನ್ನಷ್ಟು ಸಮಸ್ಯೆ ಎದುರಿಸಬೇಕಾದ ಪರಿಸ್ಥಿತಿ ಉಂಟಾಗಲಿದೆ. ಈಗಾಗಲೇ ಜಿಲ್ಲೆಯಲ್ಲಿ ವೈದ್ಯರ ಕೊರತೆ ಜೊತೆಗೆ ಉತ್ತಮವಾಗಿರುವ ಖಾಸಗಿ ಆಸ್ಪತ್ರೆಗಳು ಇಲ್ಲದೆ ಇರುವ ಕಾರಣ ಸಾರ್ವಜನಿಕರು ಚಿಕಿತ್ಸೆಗೆಗಾಗಿ ಸರಕಾರಿ ಆಸ್ಪತ್ರೆಗಳಯನ್ನ ಅವಲಂಭಿಸಿಕೊಂಡಿದ್ದಾರೆ.

ಇನ್ನೂ ಕಾರವಾರದಲ್ಲಿರುವ ಕ್ರೀಮ್ಸ್‌ನಲ್ಲಿ ಸಹ ವೈದ್ಯರ ಕೊರೆತೆ ಇದೆ. ಅದು ಅಲ್ಲದೆ ಯಾವುದೇ ವೈದ್ಯರು ಇಲ್ಲಿಗೆ ಬರಲು ಹಿಂದೆಟು ಹಾಕಿತ್ತಿರುವುದರಿಂದ ಸಾರ್ವಜನಿಕರು ಮಂಗಳೂರು,ಗೋವಾ, ಸೇರಿದಂತೆ ಬೇರೆ ಆಸ್ಪತ್ರೆಗಳತ್ತ ಮುಖ ಮಾಡಬೇಕಾದ ಪರಿಸ್ಥಿತಿ ಇದೆ. ಹೀಗಿರುವಾ ಇರುವ ಒಂದಿಷ್ಟು ಒಳ್ಳೆ ಸೇವೆಯನ್ನ ನೀಡುವ ವೈದ್ಯದರನ್ನ ಬೇರೆಡೆಗೆ ವರ್ಗಾವಣೆ ಮಾಡಿದರೆ ಜಿಲ್ಲೆಯ ಜನರ ಆರೋಗ್ಯ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ.

ವೈದ್ಯರ ವರ್ಗಾವಣೆ ಮಾಡದಂತೆ ಒತ್ತಾಯ
ಜಿಲ್ಲೆಯಲ್ಲಿ ಇರುವ ಒಳ್ಳೆಯ ವೈದ್ಯರನ್ನ ವರ್ಗಾವಣೆ ಮಾಡದಂತೆ ಸಾರ್ವಜನಿಕರು ಸಹ ಜನಪ್ರತಿಧಿಗಳ‌‌ ಮೇಲೆ ಸಾಕಷ್ಟು ಒತ್ತಡ ಹಾಕುತ್ತಿದ್ದಾರೆ. ಜಿಲ್ಲೆಯ ಕೆಲವೊಂದು ಸರಕಾರಿ ಆಸ್ಪತ್ರೆಯಲ್ಲಿರುವ ವೈದ್ಯರು ಉತ್ತಮ ಸೇವೆ ನೀಡುತ್ತಿದ್ದಾರೆ. ಅವರ ಸೇವೆ ಜನರಿಗೆ ತೀರಾ ಅವಶ್ಯಕವಾಗಿದೆ. ಸರಿಯಾದ ಒಂದು ಆಸ್ಪತ್ರೆ ಇಲ್ಲದೆ ಇರುವ ಜನರಿಗೆ ಒಳ್ಳೆಯ ಸೇವೆ ನೀಡುತ್ತಿರುವ ವೈದ್ಯರನನ್ನ ವರ್ಗವಣೆ ಮಾಡಿದರೆ ಜಿಲ್ಲೆಯಲ್ಲಿನ ವೈದ್ಯಕೀಯ ಸೇವೆ ಇನ್ನಷ್ಟು ಪಾತಾಳಕ್ಕೆ ಕುಸಿಯುವ ಸಾಧ್ಯತೆ ಇದೆ. ಇದೆ ರಾಜ್ಯದ ಬೇರೆ ಜಿಲ್ಕೆಯಲ್ಲಿ ಮಾಡುವಂತೆ ನಮ್ಮ ಜಿಲ್ಲೆಯಲ್ಲಿನ ಒಳ್ಳೆಯ ವೈದ್ಯರನ್ನ ವರ್ಗಾವಣೆ ಮಾಡದಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಚುನಾವಣಾ ಗಿಮಿಕ್ ಮಾಡಿದ ಬಿಜೆಪಿ
ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿ ಇರುವ ಸಮಯದಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಸ್ಥಾಪನೆ ಮಾಡಬೇಕು ಎಂದು ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಹೋರಾಟ, ಅಭಿಯಾನಗಳು ನಡೆಸಲಾಗಿತ್ತು. ಜನರ ಯಾವುದೇ ಹೋರಾಟಕ್ಕೂ ಸರಕಾರ ಜಗ್ಗದೆ ಇರುವಾಗ ವಿಧಾಸಭಾ ಚುನಾವಣೆಯ ಬಹಿಷ್ಕಾರದ ಎಚ್ಚರಿಕೆ ನೀಡಿದರು. ಇದರಿಂದ ಎಚ್ಚೇತ್ತುಕೊಂಡ ಅಂದಿನ ಸರಕಾರದ ಆರೋಗ್ಯ ಸಚಿವ ಡಾ. ಸುಧಾಕರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಆಸ್ಪತ್ರೆಗೆ ಅಡಿಗಲ್ಲು ಹಾಕುವ ನಾಟಕವಾಡಿ ಜನರ ಕಿವಿಗೆ ಹೂವಿಟ್ಟು ಹೋದರು. ಆದರೆ ಅಂದಿನಿಂದ ಇಂದಿನ ವರಗೆ ಮಲ್ಪಿಸ್ಪೇಷಾಲಿಟಿ ಆಸ್ಪತ್ರೆ ಸ್ಥಾಪನೆ ಬಗ್ಗೆ ಯಾರೂ ಕೂಡ ಚಕಾರ ಎತ್ತದಿರುವುದು ಜಿಲ್ಲೆಯ ಜನರ ಮತ್ತೊಂದು ದುರಂತ.

ಮಾತಿಗೆ ತಪ್ಪಿದ ಕಾಂಗ್ರೆಸ್
ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಸ್ಥಾಪನೆ ವಿಚಾರಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಚುನಾವಣಾ ಸಂದರ್ಭದಲ್ಲಿ ಕೊಟ್ಟ ಮಾತಿಗೆ ತಪ್ಪಿದೆ. ಚುನಾವಣಾ ಪ್ರಚಾರದ ಸಮಯದಲ್ಲಿ ಜಿಲ್ಲೆಗೆ ಆಗಮಿಸಿದ ಇಂದಿನ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ ಇಬ್ಬರೂ ನಾಯಕರು ರಾಜ್ಯದಲ್ಲಿ ನಮ್ಮ ಸರಕಾರ ಬಂದರೆ ಜಿಲ್ಲೆಯಲ್ಲಿ ಮೊದಲು ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಗೆ ಸ್ಥಾಪನೆ ಮಾಡತ್ತವೆ ಎಂದು ಭಾಷಣ ಮಾಡಿ ಓಟುಗಿಟ್ಟಿಸಿಕೊಂಡರು, ಆದರೆ ಸರಕಾರ ರಚನೆಯಾಗಿ ಎರಡು ವರ್ಷ ಸಮೀಪಿಸುತ್ತಾ ಬಂದರು ಆಸ್ಪತ್ರೆ ಸ್ಥಾಪನೆ ಬಗ್ಗೆ ಈಗ ತುಟಿಬಿಚ್ಚುತ್ತಿಲ್ಲ. ಅಂದು ಬಿಜೆಪಿ ಚುನಾವಣಾ ಪೂರ್ವದಲ್ಲಿ ಅಡಿಗಲ್ಲು ಹಾಕಿದರೆ.ಕಾಂಗ್ರೇಸ್ ಆಸ್ಪತ್ರೆ ಭರವಸೆ ನೀಡಿ ಮತ ಪಡೆದು ಕೊಟ್ಟಮಾತು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಒಟ್ಟಿನಲ್ಲಿ ಈ ರಾಜಕೀಯ ನಾಯಕರ ಭರವಸೆಯ ಮಾತಿನಲ್ಲಿ ಜನ ಹೈರಾಣಾಗಿರುವುದು ಮಾತ್ರ ಸತ್ಯ..

ಗಮನಿಸಿ