ಸುದ್ದಿಬಿಂದು ಬ್ಯೂರೋ
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಸಿದ್ಧತೆಗಳು ಚುರುಕುಗೊಂಡಿದ್ದು,, ಸಚಿವ ಸ್ಥಾನಕ್ಕಾಗಿ ಹಲವು ಹಿರಿಯ ಹಾಗೂ ಪ್ರಭಾವಿ ಶಾಸಕರ ಹೆಸರುಗಳು ಕೇಳಿಬರುತ್ತಿದ್ದು, ಅಂತಿಮ ಪಟ್ಟಿಯನ್ನು ಹೈಕಮಾಂಡ್ ಅನುಮೋದನೆಯ ಬಳಿಕವೇ ಪ್ರಕಟಿಸುವ ಸಾಧ್ಯತೆ ಇದೆ.
ಶಾರ್ಟ್ಲಿಸ್ಟ್ನಲ್ಲಿ ಚರ್ಚೆಯಾಗುತ್ತಿರುವ ಹೆಸರುಗಳು:
ಅಜಯ್ ಧರ್ಮಸಿಂಗ್, ಅಪ್ಪಾಜಿ ನಾಡಗೌಡ, ಶರತ್ ಬಚ್ಚೇಗೌಡ, ರಿಜ್ವಾನ್ ಅರ್ಷದ್, ಮಂಕಾಳ್ ವೈದ್ಯ, ಎ.ಎಸ್. ಪೊನ್ನಣ್ಣ, ಎಸ್.ಎಸ್. ಮಲ್ಲಿಕಾರ್ಜುನ್, ಲಕ್ಷ್ಮಣ ಸವದಿ, ಚಳ್ಳಕೆರೆ ರಘುಮೂರ್ತಿ, ಅನ್ನಪೂರ್ಣ ತುಕಾರಾಂ, ಸಲೀಂ ಅಹಮದ್, ತನ್ವೀರ್ ಸೇಠ್, ಮಧು ಬಂಗಾರಪ್ಪ, ವಿಜಯಾನಂದ ಕಾಶಪ್ಪನವರ್, ಪುಟ್ಟರಂಗ ಶೆಟ್ಟಿ, ಚೆಲುವರಾಯಸ್ವಾಮಿ,ಲಕ್ಷ್ಮಿ ಹೆಬ್ಬಾಳಕರ್, ಶಿವರಾಜ್ ತಂಗಡಗಿ, ದಿನೇಶ್ ಗುಂಡೂರಾವ್, ಶಿವಲಿಂಗೇಗೌಡ
ಆರತಿ ಕೃಷ್ಣ, ಹೆಚ್.ಸಿ. ಬಾಲಕೃಷ್ಣ ಇವರುಗಳ ಹೆಸರು ಅಂತಿ ಆಗಿದೆ ಎನ್ನಲಾಗಿದೆ.
ಇಂದು ಮಧ್ಯಾಹ್ನ ನಾಲ್ಕು ಗಂಟೆ ಬಳಿಕ ದೆಹಲಿಯಲ್ಲಿ ಹೈಕಮಾಂಡ ಜೊತೆ ಮತ್ತೊಂದು ಸುತ್ತಿನ ಸಭೆ ಬಳಿಕ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ..ಪ್ರವಾಸದಲ್ಲಿರುವ ರಾಜ್ಯಪಾಲರು ಇಂದು ರಾತ್ರಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದು, ಪ್ರಮಾಣವಚನ ಕುರಿತು ಖುದ್ದು ಸಿಎಂ ಡಿಕೆ ಶಿವಕುಮಾರ ಸಮಯ ಕೇಳುವುದಕ್ಕಾಗಿ ರಾಜ್ಯಪಾಲರೊಂದಿಗೆ ಮಾತುಕತೆ ನಡೆಸಿದ್ದಾರೆನ್ನಲಾಗಿದೆ.ಬುಧುವಾರ ತಾವು ವಾಪಸ್ ಆಗುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆನ್ನಲಾಗಿದ್ದು, ಗುರುವಾರ ಜುಲೈ 30ಕ್ಕೆ ಪ್ರಮಾಣವಚನ ಮಾಡುವುದಕ್ಕೆ ಸಮಯ ನೀಡಿದ್ದಾರೆನ್ನಲಾಗಿದೆ.

