ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ಮುರ್ಡೇಶ್ವರದ ದೇವಸ್ಥಾನದ ನಿರ್ಗಮನ ದ್ವಾರದ ರಸ್ತೆಯಲ್ಲಿರುವ ಇರುವ ಗೂಡಂಗಡಿ ಬಿಚ್ ಗೆ ಸ್ಥಳಾಂತರ ಮಾಡುವಂತೆ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ ಆಗ್ರಹಿಸಿದ್ದಾರೆ
.

ಈ ಬಗ್ಗೆ ಸ್ಥಳಿಯ ಗ್ರಾಮ ಪಂಚಾಯತ್ ಮಾವಳ್ಳಿ 1 ಕ್ಕೆ ಮನವಿ ಕೊಟ್ಟಿದ್ದು ಮತ್ತು ಜಿಲ್ಲಾಧಿಕಾರಿಗಳ ವಾಟ್ಸಪ್ ನಂಬರ್ ಗೆ ಕೂಡ ದೂರ ಕೊಟ್ಟಿದ್ದು ಆ ದೂರಿನನ್ವಯ ಜಿಲ್ಲಾಧಿಕಾರಿಗಳ ಕಚೇರಿಯಿಂದ ಕಾರ್ಯ ನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯತ ಭಟ್ಕಳ ಇವರಿಗೆ ಸೂಕ್ರ ಕ್ರಮ ಕೈಗೊಳ್ಳಲು ಆದೇಶ ಸಹ ಮಾಡಲಾಗಿದೆ.ಆದರೆ‌ ಕಾರ್ಯ ನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯತ ಭಟ್ಕಳ ಇವರು ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ್ ಮಾವಳ್ಳಿ 1 ಇವರಿಗೆ ಅಗತ್ಯ ಕ್ರಮ ಕೈಗೊಳ್ಳಲು ನೋಟೀಸ್ ಜಾರಿ ಮಾಡಿದ್ದು ಗ್ರಾಮ ಪಂಚಾಯತ್ ಗೂಡಂಗಡಿ ಕಾರರ ಅಧ್ಯಕ್ಷರಿಗೆ ನೋಟೀಸ್ ಜಾರಿ ಮಾಡಿದೆ‌‌. ಆದರೆ ಇದುವರಗೆ ದೂರಿಗೆ ಸಂಬಂದಿಸಿದ ಅಧಿಕಾರಿಗಳು ಕ್ರಮ ಜರುಗಿಸಿಲ್ಲ. ಇದರಿಂದ ಟ್ರಾಫಿಕ್ ಸಮಸ್ಯೆ ಮುಂದುವರೆದಿದೆ. ಸಾರ್ವಜನಿಕರಿಗೆ ಆಗುತ್ತಲೆ ಇದೆ.

ಗೂಡಂಗಡಿ ಕಾರರಿಗೆ ಅಂಗಡಿ ಮಳಿಗೆ ಇಟ್ಟುಕೊಳ್ಳಲು ಜಿಲ್ಲಾ ಪಂಚಾಯತ್ CEO ಮತ್ತುಲಳ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರವಾಸಿಗರಿಗೆ ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆ, ಟ್ರಾಫಿಕ್ ಸಮಸ್ಯೆ ಆಗದೆ ಇರುವ ರೀತಿಯಲ್ಲಿ ರಸ್ತೆಯಿಂದ 50 ಮೀಟರ್ ಹಿಂದಿನಿಂದ ಬಿಚ್ ನಲ್ಲಿ ಅಂಗಡಿ ಇಟ್ಟುಕೊಳ್ಳಲು ಅವಕಾಶ ನೀಡುವಂತೆ ಪಂಚಾಯತ್ ಠರಾವು ಮಾಡುವಂತೆ ಸಲಹೆ ನೀಡಿದ್ದರು.ಗ್ರಾಮ ಪಂಚಾಯತ್ ಠರಾವು ಮಾಡಿ ಅಂಗಡಿ ಇಟ್ಟುಕೊಳ್ಳಲು ಅವಕಾಶ ಕೊಟ್ಟಿದ್ದು ಇತ್ತೀಚಿನ ವರ್ಷಗಳಲ್ಲಿ ಒಂದೊಂದೆ ಗೂಡಂಗಡಿ ಬೀಚ್ ಬಿಟ್ಟು ರಸ್ತೆ ಮೇಲೆ ಬಂದಿದ್ದು ಇದರಿಂದ ರಿಕ್ಷಾ ರಸ್ತೆಯಲ್ಲಿ ನಿಲ್ಲಬೇಕಾಗಿದೆ ಇದರಿಂದ ಪ್ರವಾಸಿಗರ ಸಮೇತ ಸಾರ್ವಜನಿಕರಿಗೆ ಟ್ರಾಫಿಕ್ ಕಿರಿಕಿರಿ ಉಂಟಾಗಿದೆ.

ಕೂಡಲೇ ರಸ್ತೆಯ ಮೇಲೆ ಬಂದ ಎಲ್ಲಾ ಗೂಡಂಗಡಿಗಳನ್ನು ಬೀಚ್ ಗೆ ಸ್ಥಳಾಂತರ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮಾವಳ್ಳಿ ಮುರುಡೇಶ್ವರ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ್ ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್ ಈ ಮೂಲಕ ಆಗ್ರಹಹಿಸಿದ್ದಾರೆ. ಒಂದು ವಾರದ ಒಳಗೆ ಕ್ರಮ ಕೈಗೊಳ್ಳದ್ದಿದ್ದರೆ ಗ್ರಾಮ ಪಂಚಾಯಿತಿ ಎದುರುಗಡೆ ಪ್ರತಿಭಟನೆ ನಡೆಸುವುದಾಗಿ ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಗಮನಿಸಿ