ರಾಜಕೀಯ, ಮಡಿವಂತಿಕೆ ಕಳೆದುಕೊಳ್ಳುತ್ತಿದೆ ಅನ್ನೋದಕ್ಕೆ ಹಾಸನದ ಈ ಘಟನೆ ಸಾಕ್ಷಿಯಾಗಿದೆ. ಚುನಾವಣೆಗೆ ಇನ್ನು ನಾಲ್ಕು ದಿನ ಬಾಕಿ ಇರುತ್ತಿದ್ದಂತೆ ಹಾಸನದ ರಾಜಕೀಯದಲ್ಲಿ ವ್ಯಕ್ತಿಯೊಬ್ಬರ ಅಶ್ಲೀಲ ತುಣುಕುಗಳು ಹರಿದಾಡುತ್ತಿವೆ.
ನಾಡಿನುದ್ದಕ್ಕೂ ರಾಜಕಾರಣದ ಬೇರು ಹೊಂದಿರುವ ಪಕ್ಷವೊಂದರ ಯುವ ನಾಯಕನಿಗೆ ಸಂಬಂದಪಟ್ಟಿವೆ ಎಂದು ಹೇಳಲಾದ ಅಶ್ಲೀಲ ತುಣುಕುಗಳನ್ನು ವೈರಲ್ ಮಾಡಲಾಗಿದೆ..
ಇದನ್ನೂ ಓದಿ
- ಡಿ ಕೆ ಶಿವಕುಮಾರ ಪಿಎಸ್ ಕಾರು ಅಪಘಾತ, ಬೈಕ್ ಸವಾರ ಸ್ಥಳದಲ್ಲೇ ಸಾವು
- ಉತ್ತರ ಕನ್ನಡದಲ್ಲಿ ನಾಳೆ ಡಿಸಿಎಂ ಡಿಕೆ ಶಿವಕುಮಾರ್ ಏಕಾಂತ ಪೂಜೆ
- ಮಹಿಳಾ ಪೊಲೀಸ್ ಅಧಿಕಾರಿ ಕುತ್ತಿಗೆಯಿಂದ 60 ಗ್ರಾಂ ಚಿನ್ನ ಎಗರಿಸಿದ ಕಳ್ಳ
ಎಪ್ರಿಲ್ 26 ರಂದು ಹಾಸನ ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯಲಿದ್ದು, ಮತದಾನಕ್ಕೂ ಮುನ್ನ ವೈರಲ್ ಆಗಿರುವ ಅಶ್ಲೀಲ ತುಣುಕುಗಳು ಹಾಸನದ ಜನರನ್ನು ಹೈರಾಣಾಗಿಸಿದೆ ಎನ್ನಲಾಗಿದೆ. ನಗ್ನ ರಾಜಕಾರಣ, ದ್ವೇಷ, ಅಸೂಯೆಯ ರಾಜಕಾರಣಕ್ಕೆ ಕಾರಣವಾಗಿದೆ ಎನ್ನಲಾಗಿದೆ.





