suddibindu.in
Kumta : ಕುಮಟಾ : ನನಗೆ ಟಿಕೆಟ್ ಸಿಗುತ್ತೊ ಬಿಡುತ್ತೊ ಎಂಬ ಚಿಂತೆ ಬೇರೆಯವರಿಗ್ಯಾಕೆ. ಉತ್ತರ ಕನ್ನಡ(uttar kannada)ಕ್ಷೇತ್ರದ ಟಿಕೆಟ್ ವಿಚಾರ ಬೇರೆಯವರಿಗ್ಯಾಕೆ..? ಒಟ್ಟಿನಲ್ಲಿ ಉತ್ತರ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತೆ ಎಂದು ಸಂಸದ ಅನಂತಕುಮಾರ ಹೆಗಡೆ (MP Anantakumar,) ಹೇಳಿದರು.
ಅವರು ಇಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಜಗತ್ಪ್ರಸಿದ್ಧ ಯಾಣ (Yana)ದೇವಸ್ಥಾನ ಪ್ರವಾಸಿಗರಿಗಾಗಿ ದೇಶದಲ್ಲೇ ಮೊದಲ ಬಾರಿಗೆ ವೈಫೈ- 7 ಸೇವೆ ಉದ್ಘಾಟಿಸಿ ಮಾತನಾಡಿದರು.ಅಭ್ಯರ್ಥಿಗಳ ಲಿಸ್ಟ್ ಬಿಡುಗಡೆ (List of Candidates Released,)ಮಾಡೋ ವಿಚಾರ ಹೈ ಕಮಾಂಡ್ ನಿರ್ಧರಿಸುತ್ತೆ ಇವತ್ತು ಮಾಡುತ್ತೋ ಮಾತ್ಯಾವತ್ತು ಮಾಡುತ್ತೆ ಎಂಬುವುದು ಗೊತ್ತಿಲ್ಲ ಎಂದರು.
ಇದನ್ನೂ ಓದಿ:-
- ಮನೆಗೆ ಮರಳುತ್ತಿದ್ದ ವ್ಯಕ್ತಿಗೆ ದಾರಿಯಲ್ಲೇ ಎದುರಾಯ್ತು ಕರಡಿ; ಕ್ಷಣಾರ್ಧದಲ್ಲಿ ದಾಳಿ!
- ಗುರುಸನ್ನಿಧಿಯಲ್ಲಿ ಭೀಮಣ್ಣ ನಾಯ್ಕ ದಂಪತಿ; ಕ್ಷೇತ್ರದ ಜನರಿಗಾಗಿ ಸಲ್ಲಿಸಿದ ವಿಶೇಷ ಪ್ರಾರ್ಥನೆ
- Dr’ ಮಾದರಿಯಲ್ಲಿ ಶಿಕ್ಷಕರಿಗೂ ‘Tr’ ! ಸರ್ಕಾರದ ಹೊಸ ಆದೇಶದಲ್ಲಿ ಏನಿದೆ?
ಅನಂತಕುಮಾರ ಹೆಗಡೆ ಒಂದೇ ಒಂದು ಅಭಿವೃದ್ದಿ ಮಾಡಿಲ್ಲ ಎಂದು ಸಿ ಎಂ ಸಿದ್ದರಾಮಯ್ಯ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅನಂತಕುಮಾರ ಇಂತಹ ಪುಷ್ಯ ಕ್ಷೇತಗಳಲ್ಲಿ ಸಿದ್ದರಾಮಯ್ಯನವರ ಹೆಸರು ನೆನಪು ಮಾಡಿಕೊಳ್ಳಬಾರದು ಎಂದರು.




