ಸುದ್ದಿಬಿಂದು ಬ್ಯೂರೋ ವರದಿ
ಗೋಕರ್ಣ: ಮಹಾಶಿವರಾತ್ರಿ ಅಂಗವಾಗಿ ದಕ್ಷೀಣಕಾಶಿ ಎಂದೆ ಪ್ರಸಿದ್ದಿ ಪಡೆದಿರುವ ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಮಹಾಭಲೇಶ್ವರ ದೇಗುಲದಲ್ಲಿ ಆತ್ಮಲಿಂಗ ಸ್ಪರ್ಶಪೂಜೆಗಾಗಿ ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತ ಸಾಗರವೆ ಗೋಕರ್ಣಕ್ಕೆ ಹರಿದು ಬಂದಿದೆ.
ರಾಜ್ಯ ಸೇರಿದಂತೆ ದೇಶದ ನಾನಾಕಡೆಯಿಂದ ಬಂದ ಶಿವ ಭಕ್ತರು ಮುಂಜಾನೆ ನಾಲ್ಕು ಗಂಟೆಯಿಂದಲ್ಲೇ ಮುಖ್ಯಸಮುದ್ರ ಹಾಗೂ ಕೋಟಿ ತೀರ್ಥದಲ್ಲಿ ಸ್ಥಾನ ಮಾಡಿ ಸರದಿಸಾಲಿನಲ್ಲಿ ನಿಂದು ಆತ್ಮಲಿಂಗಕ್ಕೆ ಪೂಜೆ ಕಾಯುತ್ತಿದ್ದರು.ಬೆಳಿಗ್ಗೆ ಐದು ಗಂಟೆಯಿಂದ ಪೂಜೆಗೆ ಅವಕಾಶ ನೀಡಲಾಯಿತು. ಇದರಿಂದಾಗಿ ಶಿವಭಕ್ತರು ಗರ್ಭಗುಡಿಯೊಳಗೆ ಪ್ರವೇಶಿಸಿ, ಆತ್ಮಲಿಂಗಕ್ಕೆ ಹಾಲಿನ ಅಭಿಷೇಕ,ಬಿಲ್ವಪತ್ರ ಸೇರಿದಂತೆ ವಿವಿಧ ಪ್ರಕಾರದ ಹೂವುಗಳನ್ನು ಅರ್ಪಿಸಿದರು. ಆತ್ಮಲಿಂಗವನ್ನು ಸ್ಪರ್ಶಿಸಿ ಪೂನಿತರಾದರು.

ಇನ್ನೂ ಜಿಲ್ಲೆಯ ಶಿವದೇವಾಲಯವಾಗಿರುವ ಮೂರುಡೇಶ್ವರ, ಧಾರೇಶ್ವರ,ಶೆಜೇಸ್ವರ,ಯಾಣ, ಮಹಾಲಿಂಗೇಶ್ವರ ಸೇರಿದಂತೆ ಅನೇಕ ಶಿವ ದೇವಾಲಯಕ್ಕೆ ಆಗಮಿಸಿದ ಭಕ್ತರು ಬೆಳಿಗ್ಗೆಯಿಂದಲ್ಲೆ ವಿಶೇಷ ಪೂಜೆ ಸಲ್ಲಿಸಿದ್ದರು..
ಇದನ್ನೂ ಓದಿ