ಸುದ್ದಿಬಿಂದು ಬ್ಯೂರೋ ವರದಿ
ಗೋಕರ್ಣ: ಮಹಾಶಿವರಾತ್ರಿ ಅಂಗವಾಗಿ ದಕ್ಷೀಣಕಾಶಿ ಎಂದೆ ಪ್ರಸಿದ್ದಿ ಪಡೆದಿರುವ ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಮಹಾಭಲೇಶ್ವರ ದೇಗುಲದಲ್ಲಿ ಆತ್ಮಲಿಂಗ ಸ್ಪರ್ಶಪೂಜೆಗಾಗಿ ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತ ಸಾಗರವೆ ಗೋಕರ್ಣಕ್ಕೆ ಹರಿದು ಬಂದಿದೆ.
ರಾಜ್ಯ ಸೇರಿದಂತೆ ದೇಶದ ನಾನಾಕಡೆಯಿಂದ ಬಂದ ಶಿವ ಭಕ್ತರು ಮುಂಜಾನೆ ನಾಲ್ಕು ಗಂಟೆಯಿಂದಲ್ಲೇ ಮುಖ್ಯಸಮುದ್ರ ಹಾಗೂ ಕೋಟಿ ತೀರ್ಥದಲ್ಲಿ ಸ್ಥಾನ ಮಾಡಿ ಸರದಿಸಾಲಿನಲ್ಲಿ ನಿಂದು ಆತ್ಮಲಿಂಗಕ್ಕೆ ಪೂಜೆ ಕಾಯುತ್ತಿದ್ದರು.ಬೆಳಿಗ್ಗೆ ಐದು ಗಂಟೆಯಿಂದ ಪೂಜೆಗೆ ಅವಕಾಶ ನೀಡಲಾಯಿತು. ಇದರಿಂದಾಗಿ ಶಿವಭಕ್ತರು ಗರ್ಭಗುಡಿಯೊಳಗೆ ಪ್ರವೇಶಿಸಿ, ಆತ್ಮಲಿಂಗಕ್ಕೆ ಹಾಲಿನ ಅಭಿಷೇಕ,ಬಿಲ್ವಪತ್ರ ಸೇರಿದಂತೆ ವಿವಿಧ ಪ್ರಕಾರದ ಹೂವುಗಳನ್ನು ಅರ್ಪಿಸಿದರು. ಆತ್ಮಲಿಂಗವನ್ನು ಸ್ಪರ್ಶಿಸಿ ಪೂನಿತರಾದರು.

ಇನ್ನೂ ಜಿಲ್ಲೆಯ ಶಿವದೇವಾಲಯವಾಗಿರುವ ಮೂರುಡೇಶ್ವರ, ಧಾರೇಶ್ವರ,ಶೆಜೇಸ್ವರ,ಯಾಣ, ಮಹಾಲಿಂಗೇಶ್ವರ ಸೇರಿದಂತೆ ಅನೇಕ ಶಿವ ದೇವಾಲಯಕ್ಕೆ ಆಗಮಿಸಿದ ಭಕ್ತರು ಬೆಳಿಗ್ಗೆಯಿಂದಲ್ಲೆ ವಿಶೇಷ ಪೂಜೆ ಸಲ್ಲಿಸಿದ್ದರು..
ಇದನ್ನೂ ಓದಿ
- ಸಮುದ್ರದಲ್ಲಿ ಮುಳುಗಿ ಪ್ರವಾಸಿಗ ಸಾವು; ಕುಮಟಾ ಕಡ್ಲೆ ಸಮುದ್ರ ತೀರದಲ್ಲಿ ದುರ್ಘಟನೆ
- ಮಾರಿ ಹೊರೆ ಸ್ಥಳಾಂತರ ವೇಳೆ ಗಲಾಟೆ; ವ್ಯಕ್ತಿಯ ಕುತ್ತಿಗೆ ಹಿಸುಕಿ ಕೊಲೆ ಯತ್ನ, ಕುಮಟಾ ಠಾಣೆಯಲ್ಲಿ ಪ್ರಕರಣ
- ಹೊನ್ನಾವರ ಬಂಗಾರದ ಆಭರಣ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ₹17.08 ಲಕ್ಷ ಮೌಲ್ಯದ ಚಿನ್ನ ಜಪ್ತಿ, ಇಬ್ಬರ ಬಂಧನ
- ಲಾರಿ ಕಳ್ಳತನ ಪ್ರಕರಣದ ಬೆಳಗಾವಿ ಮೂಲದ ಆರೋಪಿ ಬಂಧನ; ಹಳಿಯಾಳ ಪೊಲೀಸರ ಕಾರ್ಯಾಚರಣೆ

