ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರದಲ್ಲಿ ನೂತನವಾಗಿ ಸೇರ್ಪಡೆಯಾದ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಸರ್ಕಾರ ಅಧಿಕೃತವಾಗಿ ಇಲಾಖೆಗಳ ಜವಾಬ್ದಾರಿಯನ್ನು ಪ್ರಕಟಿಸಿದ್ದು, ಪ್ರಮುಖ ಇಲಾಖೆಗಳು ವಿವಿಧ ಸಚಿವರಿಗೆ ಹಂಚಿಕೆಯಾಗಿವೆ.

ಸಮಾಜ ಕಲ್ಯಾಣ, ಕೃಷಿ, ಶಿಕ್ಷಣ, ಸಹಕಾರ, ವಕ್ಫ್, ಮೀನುಗಾರಿಕೆ, ಕಾರ್ಮಿಕ, ಅರಣ್ಯ, ಉನ್ನತ ಶಿಕ್ಷಣ ಸೇರಿದಂತೆ ಹಲವು ಪ್ರಮುಖ ಇಲಾಖೆಗಳ ಜವಾಬ್ದಾರಿಯನ್ನು ನೂತನ ಸಚಿವರಿಗೆ ವಹಿಸಲಾಗಿದೆ.

ಸಚಿವರಿಗೆ ಹಂಚಿಕೆಯಾಗಿರುವ ಖಾತೆಗಳು ಹೀಗಿವೆ:
ಪಿ.ಎಂ. ನರೇಂದ್ರಸ್ವಾಮಿ – ಸಮಾಜ ಕಲ್ಯಾಣ ಇಲಾಖೆ
ಬಸವರಾಜ ರಾಯರೆಡ್ಡಿ – ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ, ಎಸ್.ಎಸ್. ಮಲ್ಲಿಕಾರ್ಜುನ – ತೋಟಗಾರಿಕೆ ಹಾಗೂ ಗಣಿ-ಭೂವಿಜ್ಞಾನ ಇಲಾಖೆ, ಎನ್. ಚಲುವರಾಯಸ್ವಾಮಿ – ಕೃಷಿ ಇಲಾಖೆ, ಕೆ.ಎಂ. ಶಿವಲಿಂಗೇಗೌಡ – ವಸತಿ ಇಲಾಖೆ
ಲಕ್ಷ್ಮಣ ಸವದಿ – ಸಹಕಾರ ಹಾಗೂ ಸಕ್ಕರೆ ಇಲಾಖೆ
ಮಧು ಬಂಗಾರಪ್ಪ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ

ಜಮೀರ್ ಅಹಮದ್ ಖಾನ್ – ವಕ್ಫ್, ಹಜ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕೆ.ಎನ್. ಬಸವಂತಪ್ಪ – ಪೌರಾಡಳಿತ ಇಲಾಖೆ, ವಿಜಯಾನಂದ ಕಾಶಪ್ಪನವರ್ – ಕೈಮಗ್ಗ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಇಲಾಖೆ, ಅಜಯ್ ಸಿಂಗ್ – ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ವಲಯ ಉದ್ದಿಮೆಗಳ ಇಲಾಖೆ, ರುದ್ರಪ್ಪ ಲಮಾಣಿ – ಅಬಕಾರಿ ಇಲಾಖೆ
ಹೆಚ್.ಸಿ. ಬಾಲಕೃಷ್ಣ – ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಇಲಾಖೆ, ರಿಜ್ವಾನ್ ಅರ್ಷದ್ – ಉನ್ನತ ಶಿಕ್ಷಣ ಇಲಾಖೆ
ಪುಟ್ಟರಂಗಶೆಟ್ಟಿ – ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆ
ಬಿ. ನಾಗೇಂದ್ರ – ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ

ಸಂತೋಷ್ ಎಸ್. ಲಾಡ್ – ಕಾರ್ಮಿಕ ಇಲಾಖೆ
ಶಿವರಾಜ ತಂಗಡಗಿ – ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಹಾಗೂ ಸಂಸ್ಕೃತಿ ಇಲಾಖೆ, ಟಿ. ರಘುಮೂರ್ತಿ – ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ

ಸಚಿವ ಸಂಪುಟ ವಿಸ್ತರಣೆಯ ನಂತರ ಖಾತೆ ಹಂಚಿಕೆಯನ್ನು ಅಂತಿಮಗೊಳಿಸಿರುವ ಸರ್ಕಾರ, ಆಡಳಿತಾತ್ಮಕ ಕಾರ್ಯಗಳಿಗೆ ವೇಗ ನೀಡುವ ಉದ್ದೇಶದಿಂದ ಈ ಆದೇಶ ಹೊರಡಿಸಿದೆ.