ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಉತ್ತರಕನ್ನಡ ಜಿಲ್ಲೆಯ ಇಬ್ಬಾಗದ ಪ್ರಸ್ತಾವನೆ ಸದ್ಯಕ್ಕೆ ಸರಕಾರದ ಮುಂದೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಸ್ಪಷ್ಟ ಪಡಿಸಿದ್ದಾರೆ.
ಅವರು ಇಂದು ಕಾರವಾರದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿ ಸುದ್ದಿಗೋಷ್ಟಿಯನ್ನ ಉದ್ದೇಶಿ ಮಾತನಾಡಿದ ಸಚಿವರ ಎದುರು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ನಮ್ಮ ಸರಕಾರ ಮುಂದೆ ಸದ್ಯ ಜಿಲ್ಲೆ ಇಬ್ಬಾಗದ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ.ಈ ಬಗ್ಗೆ ನಾವು ಎಲ್ಲಿಯೂ ಚರ್ಚೆ ಮಾಡಿಲ್ಲ.ಬಜೆಟ್ನಲ್ಲಿ ಬಂದಿಲ್ಲ.ಆಗಾಗ ಇತರಹ ಸುದ್ದಿಗಳನ್ನ ಹಬ್ಬಿಸುತ್ತಿರುತ್ತಾರೆ.ಆ ರೀತಿ ಯಾವುದೇ ನಡೆದಿಲ್ಲ..
ಕೆಲವರು ಇಬ್ಬಾಗ ಆಗಬೇಕು ಅಂತಾರೆ. ಇನ್ನೂ ಕೆಲವರು ಬೇಡ ಅಂತಾರೆ, ಈ ಬಗ್ಗೆ ಮುಂದಿನ ದಿನದಲ್ಲಿ ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡಬೇಕಿದೆ.ಬೇಕು,ಬೇಡ ಎನ್ನುವ ಬಗ್ಗೆ ಚರ್ಚೆ ಆಗತ್ತಿದೆ..ಈ ಬಗ್ಗೆ ಮುಂದೆ ನೋಡೋಣ ಎಂದು ಹೇಳಿದರು.
ಇನ್ನಷ್ಟು ಓದಿ
- ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್ನ್ಯೂಸ್: 100 ದಿನಗಳಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿ
- ಡಿಜಿಟಲ್ ಹಾಜರಾತಿ ದಾಖಲಿಸದ ಶಿಕ್ಷಕರ ವೇತನ ಕಡಿತಕ್ಕೆ ಮುಂದಾದ ಸರ್ಕಾರದ
- ಕರಗಿನಕೊಪ್ಪ ಮೊರಾರ್ಜಿ ವಸತಿ ಶಾಲೆಯಲ್ಲಿ ಜೇನು ದಾಳಿ: 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ
- ವಿದ್ಯುತ್ ಕಣ್ಣುಮುಚ್ಚಾಲೆ ಆಟ: ಮಳೆಗಾಲ ಆರಂಭವಾಗುತ್ತಿದ್ದಂತೆ ಗೋಕರ್ಣ ಭಾಗದಲ್ಲಿ ಹೆಚ್ಚಿದ ಸಮಸ್ಯೆ

