ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ತಾಲೂಕಿನ ಕಿಮಾನಿಯಲ್ಲಿ ಕೋಳಿ ಅಂಕ ನಡೆಯುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ ಆರೋಪಿಗಳು ಪೊಲೀಸರ ಕೈಗೆ ಸಿಗದೆ ಹೊಳೆ,ನದಿಯಲ್ಲಿ ಬಿದ್ದು ಪರಾರಿಯಾಗಿದ್ದಾರೆ.
ನಿನ್ನೆ ಶನಿವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಕಿಮಾನಿಯ ಗಜನಿ ಬಳಿ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬರುತ್ತದ್ದ ಪೊಲೀಸರನ್ನ ಕಂಡ ಕೋಳಿ ಅಂಕದ ಪಡೆಯಲ್ಲಿದ್ದವರು ಕಕ್ಕಾಬಿಕ್ಕಿಯಾಗಿ ಅಕ್ಕ-ಪಕ್ಕದಲ್ಲಿ ಇದ್ದ ಹೊಳೆ,ನದಿಯಲ್ಲಿ ಹಾರಿ ತಪ್ಪಿಸಿಕೊಂಡಿದ್ದಾರೆನ್ನಲಾಗಿದೆ. ಹಳ್ಳದಲ್ಲಿ ಬಿದ್ದವರನ್ನ ಹಿಡಿಯುವುದನ್ನ ಕೈ ಬಿಟ್ಟ ಪೊಲೀಸರು. ರಸ್ತೆ ಅಕ್ಕ-ಪಕ್ಕದಲ್ಲಿ ನಿಲ್ಲಿಸಿಟ್ಟ ಒಂದಿಷ್ಟು ಬೈಕ್ಗಳನ್ನ ತುಂಬಿಕೊಂಡು ಹೋಗಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನೂ ವಶಕ್ಕೆ ಪಡೆದ ಬೈಕ್ ಮಾಲೀಕರ ಮೇಲೆ ಕೋಳಿ ಅಂಕದ ಪ್ರಕರಣ ದಾಖಲಿಸಯವುದನ್ನ ಬಿಟ್ಟು, ನಿಲ್ಲಿಸಿಟ್ಟ ಬೈಕ್ ಪೊಲೀಸರೆ ಎತ್ತುಕೊಂಡು ಹೋಗಿ ಬೈಕ್ ಸವಾರ ಹೆಲ್ಮೆಟ್ ಧರಿಸಿಲ್ಲ ಎನ್ನುವ ಪ್ರಕರಣ ದಾಖಲಿಸಿ ಹಣ ಕಟ್ಟಿಸಿಕೊಂಡು ಕೈ ಬಿಟ್ಟಿದ್ದಾರೆನ್ನಲಾಗಿದೆ. ಆದರೆ ಇಲ್ಲೊಬ್ಬರು ತಮ್ಮ ಬೈಕ್ ನಿಲ್ಲಿಸಿಟ್ಟು ಕೂಲಿಕೆಲಸಕ್ಕೆ ಹೋಗಿದ್ದರು ಎನ್ನಲಾಗಿದ್ದು, ಆ ವ್ಯಕ್ತಿ ಒಬ್ಬರ ಬೈಕ್ ತೆಗೆದುಕೊಂಡು ಹೋದ ಪೊಲೀಸರು ಅವರ ಮೇಲೆ ಹೆಲ್ಮೇಟ್ ಧರಿಸಿಲ್ಲ ಎನ್ನುವನ್ನ ಬಗ್ಗೆ ದಂಡ ಕಟ್ಟಿಸಿಕೊಂಡಿದ್ದಾರೆನ್ನಲಾಗಿದೆ. ಇಲ್ಲೊಂದು ವಿಚಿತ್ರವೆಂದರೆ ನಿಲ್ಲಿಸಿಟ್ಟಿ ಬೈಕ್ ತೆಗೆದುಕೊಂಡು ಹೋಗಿ ಅದು ಹೇಗೆ ಹೆಲ್ಮೇಟ್ ಧರಿಸಿಲ್ಲ ಎನ್ನುವ ಬಗ್ಗೆ ದಂಡ ಕಟ್ಟಿಸಿಕೊಂಡರು ಎನ್ನುವುದೇ ಈಗ ಊರು ತುಂಬಾ ಚರ್ಚೆ ಆಗುತ್ತಿದೆ ಎನ್ನಲಾಗಿದೆ. ಪೊಲೀಸರು ಸ್ವಲ್ಪ ಪ್ರಯತ್ನ ಮಾಡಿದ್ದರೆ ಆರೋಪಿಗಳನ್ನ ಸಹ ಹಿಡಿದು ತುಂಬಿಕೊಂಡು ಹೋಗಬಹುದಾಗಿತ್ತು ಎಂದು ಆ ಭಾಗದಲ್ಲಿ ಜನ ಆಡಿಕೊಳ್ಳುತ್ತಿದ್ದಾರೆ.
ಗಮನಿಸಿ
- ಸಾಮಾಜಿಕ ಕಾಳಜಿಗೆ ಸಾಕ್ಷಿಯಾದ ತಹಶೀಲ್ದಾರ: ಐದು ಸರ್ಕಾರಿ ಶಾಲೆಗಳಿಗೆ ವಾಟರ್ ಪ್ಯೂರಿಫೈಯರ್
- ಭೀಕರ ಸರಣಿ ರಸ್ತೆ ಅಪಘಾತ: ಕುಮಟಾ ಮೂಲದ ಟಿಪ್ಪರ್ ಚಾಲಕ ಸ್ಥಳದಲ್ಲೇ ಸಾವು, 7 ಮಂದಿಗೆ ಗಾಯ
- ನಿಯಂತ್ರಣ ತಪ್ಪಿ ಗಟಾರಕ್ಕೆ ಜಾರಿದ ಸಾರಿಗೆ ಬಸ್; ಪ್ರಯಾಣಿಕರು ಸುರಕ್ಷಿತ
- ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್ನ್ಯೂಸ್: 100 ದಿನಗಳಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿ

