ಸುದ್ದಿಬಿಂದು ಬ್ಯೂರೋ ವರದಿ Suddi Bindu Digital News
ಹಾಸನ : ಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ಓರ್ವ ಮಹಿಳೆ ಮೃತಪಟ್ಟು ಮೂವರು ಗಂಭೀರ ಗಾಯಗೊಂಡ ಘಟನೆ ಹಾಸನ ತಾಲೂಕಿನ ಶಾಂತಿಗ್ರಾಮ ಬಳಿ ನಡೆದಿದೆ.
ಶಾಂತಮ್ಮ (45) ಮೃತ ಮಹಿಳೆಯಾಗಿದ್ದಾಳೆ.ಇನ್ನೂ ಹಾಸನದ ಕೆ.ಹೊಸಕೊಪ್ಪಲು ಗ್ರಾಮದ ಮೂವರಿಗೆ ಗಂಭೀರವಾದ ಗಾಯವಾಗಿದೆ. ಬೆಂಗಳೂರು ಕಡೆಯಿಂದ ಹಾಸನ ಕಡೆಗೆ ಬರುತ್ತಿದ್ದ ಆಲ್ಟೋ ಕಾರಿಗೆ ಹಿಂಬದಿಯಿಂದ ಅತೀ ವೇಗವಾಗಿ ಬರುತ್ತಿದ್ದ ವೋಕ್ಸ್ವ್ಯಾಗನ್ ಕಾರು ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.
ಗಾಯಗೊಂಡವರನ್ನ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಇನ್ನೂ ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಶಾಂತಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ
- Weather-Alert- ಮಳೆಗಾಲದಲ್ಲೇ ಗರಿಷ್ಠ ತಾಪಮಾನ ಏರಿಕೆ: ಹವಾಮಾನ ಇಲಾಖೆ ಎಚ್ಚರಿಕೆ
- ಮುರುಡೇಶ್ವರ ಬಳಿ ಭೀಕರ ರಸ್ತೆ ಅಪಘಾತ : ಬೈಕ್ ಸವಾರ ಸ್ಥಳದಲ್ಲೇ ಸಾವು
- ಕರ್ನಾಟಕದ ಬರದ ಸಂಕಷ್ಟಕ್ಕೆ ಕೇಂದ್ರದ ನೆರವು ಕೋರಿದ ಸಿಎಂ ಡಿ ಕೆ ಶಿವಕುಮಾರ : ಪ್ರಧಾನಿ ಮೋದಿಗೆ ಪತ್ರ
- “ಶಿರಸಿ–ಮುಂಡಗೋಡ–ಸೌವದತ್ತಿ ನೂತನ ಬಸ್ ಸೇವೆಗೆ ಶಾಸಕ ಶಿವರಾಮ ಹೆಬ್ಬಾರ್ ಚಾಲನೆ
- ಬಿಜೆಪಿ ಆರೋಪಗಳು ರಾಜಕೀಯ ಪ್ರೇರಿತ; ಅಕ್ರಮ ವಲಸಿಗರ ವಿಷಯದಲ್ಲಿ ಕೇಂದ್ರದ ವೈಫಲ್ಯ ಮುಚ್ಚಿಹಾಕುವ ಪ್ರಯತ್ನ: ಪ್ರಸನ್ನ ನಾಯ್ಕ್

