ಸುದ್ದಿಬಿಂದು ಬ್ಯೂರೋ‌ ವರದಿ
ಮುಂಡಗೋಡ: NMD ಜಮೀರ್ ಅಹ್ಮದ್ ದರ್ಗಾವಾಲೆಯ ಭೀಕರ ಹತ್ಯೆಯ ಪ್ರಕರಣವನ್ನ ಮುಂಡಗೋಡ ಪೊಲೀಸರು ಬೇಧಿಸಿದ್ದಾರೆ. ಹತ್ಯೆ ನಡೆದ 24 ಗಂಟೆಯೊಳಗಾಗಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. (Breaking News, Murder Case, Police Investigation)

ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರಿನ ಅಂಬಿಕಾ ಸಾವಜಿ ಹೊಟೇಲ್‌ನಲ್ಲಿ ಊಟಕ್ಕೆ ಕುಳಿತಿದ್ದ ಜಮೀರ್ ದರ್ಗಾವಾಲೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ. (Brutal Murder, Attack Case, Crime Scene, Violence News)

ತಕ್ಷಣ ಅಲರ್ಟ್ ಆದ ಮುಂಡಗೋಡ ಪೊಲೀಸರು ಮೂರು ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಬಳಿಕ ಬೆಂಗಳೂರಿನ ನೆಲಮಂಗಲ ಬಳಿ ಐವರನ್ನ ಬಂಧಿಸಿ ಕರೆತರಲಾಗಿದೆ. (Police Action, Arrested, Crime Investigation, Karnataka Police) ಬಂಧಿತ ಆರೋಪಿಗಳಲ್ಲಿ ಮಂಜುನಾಥ ನಾಗೇಂದ್ರ ಕಾಜಗಾರ(30), ಶ್ರೀಕಾಂತ ರಾಜಶೇಖರ ಕಿರಣ್ಣನವರ(22), ಮಂಜುನಾಥ ವಿಷ್ಣು ಬೆಳಗಾಂವ್(20), ಅಭಿಷೇಕ ಮಲ್ಲಕಾರ್ಜುನ ಬಡಶೆಟ್ಟಿ(22), ದೀಪಕ ನಾಗರಾಜ ನವಲೆ ಸೇರಿದ್ದಾರೆ. (Accused Arrested, Criminal Case, Suspects, Crime Report)

ಭೀಕರ ಹತ್ಯೆ ನಡೆಸಿ ಕಾರಿನಲ್ಲಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ನೆಲಮಂಗಲದಲ್ಲಿ ಬಂಧಿಸಲಾಗಿದೆ. ಆರೋಪಿತರಿಂದ ಎರಡು ಬೈಕ್, ಒಂದು ಕಾರು, ಕಂಟ್ರಿ ಮೇಡ್ ಪಿಸ್ತೂಲ್ ಮತ್ತು 6 ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. (Illegal Weapons, Gun Seized, Crime Evidence, Police Raid)
ಪ್ರಾಥಮಿಕ ತನಿಖೆಯಲ್ಲಿ ಮಂಜುನಾಥ ಕಾಜಗಾರ ಮತ್ತು ಜಮೀರ್ ನಡುವೆ ಮೀಟರ್ ಬಡ್ಡಿ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ಸಂಬಂಧಿತ ವೈಷಮ್ಯವೇ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ. ಸುಪಾರಿ ನೀಡಿ ಸಂಘಟಿತವಾಗಿ ಹತ್ಯೆ ನಡೆಸಲಾಗಿದೆ ಎನ್ನಲಾಗಿದೆ.

(Supari Killing, Real Estate Dispute, Money Lending, Crime Motive) ಈ ಕಾರ್ಯಾಚರಣೆಯಲ್ಲಿ ಉತ್ತರ ಕನ್ನಡ ಎಸ್ಪಿ ದೀಪನ್ ಎಮ್.ಎನ್ ಹಾಗೂ ಇತರ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಹಲವು ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು. (Police Team, Law Enforcement, Investigation Team, Crime Control)

ಇದನ್ನೂ ಓದಿ/ಅಮೆರಿಕ ಅಧ್ಯಕ್ಷ Donald Trump ಮೇಲೆ ಗುಂಡಿನ ದಾಳಿ ಯತ್ನ: ಭದ್ರತೆಯಿಂದ ಪಾರಾದ ಟ್ರಂಪ್