ಸುದ್ದಿಬಿಂದು ಬ್ಯೂರೋ
ಯಲ್ಲಾಪುರ : ಶಿರಸಿ-ಸಿದ್ದಾಪುರ ಕ್ಷೇತ್ರದ ನೂತನ ಶಾಸಕರಾಗಿರುವ ಭೀಮಣ್ಣ ನಾಯ್ಕ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಯಲ್ಲಾಪುರ ನಾಮಧಾರಿ ಸಮಾಜದ ಉಪಾಧ್ಯಕ್ಷ ನವೀನ ನಾಯ್ಕ, ಸೇರಿ ಅನೇಕರು ಆಗ್ರಹಿಸಿದ್ದಾರೆ.
ಭೀಮಣ್ಣ ನಾಯ್ಕ ಅವರು ಕಳೆದ ಒಂದು ವರೆದ ದಶಕದಿಂದ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿ ಸೋಲು ಗೆಲುವಿನಲ್ಲೂ ಪಕ್ಷದ ಸಂಘಟನೆಗಾಗಿ ಸಾಕಷ್ಟು ರೀತಿಯಲ್ಲಿ ದುಡಿದಿದ್ದಾರೆ. ಇವರು ಜಿಲ್ಲೆಯ ಬಹುಸಂಖ್ಯಾತ ನಾಮಧಾರಿ ಸಮಾಜಕ್ಕೆ ಸೇರಿರುವುದರಿಂದ ನೂತನ ಸರಕಾರದಲ್ಲಿ ಸಚಿವ ಸ್ಥಾನ ನೀಡಿದಲ್ಲಿ ಮುಂದಿನ ದಿನದಲ್ಲಿ ಜಿಲ್ಲಾಧ್ಯಂತ ಪಕ್ಷ ಇನ್ನಷ್ಟು ಬಲಿಷ್ಠವಾಗಿ ಸಂಘಟನೆ ಆಗಲಿದೆ. ಹೀಗಾಗಿ ಭೀಮಣ್ಣ ನಾಯ್ಕ ಅವರಿಗೆ ಸಚಿವ ಸ್ಥಾನ ನೀಡಬೇಕು.
ಒಂದು ವೇಳೆ ಅಂತಹ ಸಂದರ್ಭ ಬಂದಲ್ಲಿ ನಾವೇಲ್ಲಾ ಪಕ್ಷದ ಹೈಕಮಾಂಡ ಬಳಿ ನಮ್ಮ ನಿಯೋಗ ತೆರಳಿ ಸಚಿವ ಸ್ಥಾನ ನೀಡುವಂತೆ ಒತ್ತಾಯ ಮಾಡುತ್ತೇವೆ ಎಂದು ಉಪಾಧ್ಯಕ್ಷ ನವೀನ್ ನಾಯ್ , ಚಂದನ್ ನಾಯ್ಕ, ರೋಹಿತ ನಾಯ್ಕ, ಮಂಜುನಾಥ್ ಎಸ್ ನಾಯ್ಕ್, ಸುರೇಶ್ ನಾಯ್ಕ್, ನಾಗರಾಜ ನಾಯ್ಕ್ ಈ ಮೂಲಕ ಒತ್ತಾಯಿಸಿದ್ದಾರೆ.