ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಪ್ರತಿವರ್ಷ ಮಕರಸಂಕ್ರಾಂತಿ ಅಂದು ಎರಡು ದಿನಗಳ ಕಾಲ ನಡೆಯುವ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಮಹಾಲಿಂಗೇಶ್ವರ ಹಾಗೂ ಪರಿವಾರ ದೇವರ ಜಾತ್ರೆ ಜ.14.15ರಂದು ಎರಡು ದಿನಗಳ ಸಂಭ್ರಮ ಸಡಗರದಿಂದ ನಡೆಯಿತು..
ಜಿಲ್ಲಾದ್ಯಂತ ಸಾವಿರಾರು ಭಕ್ತರನ್ನ ಹೊಂದಿರುವ ಬರ್ಗಿ ದೇವರ ಜಾತ್ರೆಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತ ಸಾಗರವೇ ಹರಿದು ಬಂದಿತ್ತು. ವರ್ಷದ ಮೊದಲ ಜಾತ್ರೆ ಕೂಡ ಇದಾಗಿದ್ದು, ಎರಡು ದಿನ ನಡೆದ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಗ್ರಾಮದಲ್ಲಿರುವ ಮಹಾಲಿಂಗೇಶ್ವರ,ಘಟಭೀರ ಹಾಗೂ ಯಜಮಾನ ದೇವರಿಗೆ ವಿಶೇಷ ಪೂಜೆ ಹರಕೆ ನೀಡಿ ತಮ್ಮ ಇಷ್ಟಾರ್ಥ ಇಡೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿಕೊಂಡರು.
ಜನವರಿ 14ರಂದು ರಾತ್ರಿ ಸಮಯದಲ್ಲಿ ಜಾತ್ರೆ ನಡೆದರೆ 15ರಂದು ಸಂಜೆ ಹೊತ್ತದಲ್ಲಿ ಜಾತ್ರೆ ನಡೆಯಿತು..ಕಳಸದೇಗುಲದಿಂದ ಘಟಬೀರ ಹಾಗೂ ಯಜಮಾನ ದೇವರ ಕಳಸವನ್ನ ಹೊತ್ತ ಅರ್ಚಕರು ಸಾವಿರ ಸಾವಿರ ಸಂಖ್ಯೆ ಭಕ್ತರ ಜಯಘೋಷದೊಂದಿಗೆ ಮಹಾಲಿಂಗೇಶ್ವರ ದೇವಾಲಯಕ್ಕೆ ಬಂದು ಪೂಜೆ ಪಡೆದುಕೊಂಡು ಬಳಿ ಅಲ್ಲಿಂದ ಎರಡು ಕಳಸ ಯಜಮಾನ ದೇಗುಲಕ್ಕೆ ಸಾಗಿ ಪೂಜೆ ತೆಗೆದುಕೊಳ್ಳುವುದು ವಿಶೇಷ, ಬಳಿಕ ಅಲ್ಲಿಂದ ಘಟಬೀರ ದೇವರ ಕಳಸ ಮಾತ್ರ ತನ್ನ ಸ್ಘಾನಕ್ಕೆ ತೆರಳಿ ವಿಶೇಷವಾದ ಪೂಜೆ ತೆಗೆದುಕೊಳ್ಳುತ್ತದೆ.
ಭಕ್ತರು ಈ ಹಿಂದೆ ದೇವರಲ್ಲಿ ಪ್ರಾರ್ಥಿಸಿಕೊಂಡದಂತೆ ಅವರೆಲ್ಲಾ ಇಷ್ಠಾರ್ಥಗಳು ಇಡೇರಿದ ಕಾರಣ ದೇವರಿಗೆ ಹೇಳಿಕೊಂಡದಂತೆ ಹಣ್ಣು,ಕಾಯಿ, ಅಡಿಕೆ,ಅಕ್ಕಿ, ಸೇರಿದಂತೆ ಎಲ್ಲವನ್ನ ತುಲಾಬಾರದ ಸೇವೆ ಮೂಲಕ ದೇವರಿಗೆ ಸಮರ್ಪಿಸಿದ್ದರು. ಜನವರಿ 14ರಂದು ರಾತ್ರಿ ನಡೆದ ಜಾತ್ರೆಯಲ್ಲಿ ಸಿಡಿಮದ್ದುಗಳ ಪ್ರದರ್ಶನ ಭಕ್ತರನ್ನ ಗಮನಸೆಳೆಯುವಂತೆ ಮಾಡಿತು.ಇನ್ನೂ 15ರಂದು ರಾತ್ರಿ ಸ್ಥಳೀಯ ಕಲಾವಿಧರಿಂದ ನಡೆದ ನಾಟಕ ಪ್ರದರ್ಶನ ಜಾತ್ರೆಗೆ ಆಗಮಿಸಿದ ಭಕ್ತರನ್ನ ಆಕರ್ಷಿಸುವಂತೆ ಮಾಡಿತ್ತು. ಒಟ್ಟಿನಲ್ಲಿ ಎರಡುದಿನಗಳ ಕಾಲ ಬರ್ಗಿಯಲ್ಲಿ ನಡೆದ ಸಂಕ್ರಾಂತಿ ಜಾತ್ರೆ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಇದನ್ನೂ ಓದಿ
- ಖರ್ಗೆ ಅವರದ್ದು ಹತಾಶೆಯ ಹೇಳಿಕೆ: ರೂಪಾಲಿ ನಾಯ್ಕ ಕಿಡಿ
- ಅರಬೈಲ್ ಘಟ್ಟದಲ್ಲಿ ಭೀಕರ ದುರಂತ: ಕಾರಿಗೆ ಬೆಂಕಿ – ಚಾಲಕ ಸುಟ್ಟು ಕರಕಲು
- ಗಗನಕ್ಕೇರಿದ ಕೊಬ್ಬರಿ ಬೆಲೆ : ರೈತರ ಮುಖದಲ್ಲಿ ಮಂದಹಾಸ
- ಜ್ಯೋತಿಷಿ ಕಮಲಾಕರ್ ಭಟ್ಗೆ ಮತ್ತೆ ಸಂಕಷ್ಟ – ಪೋಕ್ಸೋ ಪ್ರಕರಣದಲ್ಲಿ ಭಟ್ಟ ಪೊಲೀಸ್ ಕಸ್ಟಡಿ
- ಅಂಕೋಲಾದಲ್ಲಿ ಯುವಕರಿಗೆ ಸಮ್ಮರ್ ಕ್ಯಾಂಪ್–ಅಗ್ನಿವೀರ್ ತರಬೇತಿ: ಏಪ್ರಿಲ್ 19ರಿಂದ ಆರಂಭ



