ಸುದ್ದಿಬಿಂದು ಬ್ಯೂರೊ ವರದಿ(Suddibindu Digital News)
ದಾವಣಗೆರೆ; ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ ಹಸಿಯಾಗಿರುವಾಗಲೇ ಇದೀಗ ದಾವಣಗೇರೆ ನಗರದ ಹದಡಿ ರಸ್ತೆಯ ಬಳಿ ಹಾಡುಗಲೆ 7-8 ರಿಂದ ಮಂದಿ ರೌಡಿಶೀಟರ್ ಓರ್ವನಿಗೆ ಬರ್ಬರವಾಗಿ ಹತ್ಯೆಮಾಡಿರುವ ಘಟನೆ ನಡೆದಿದೆ
ಸಂತೋಷ್ ಅಲಿಯಾಸ್ ಕಣುಮ ಕೊಲೆಯಾದ ರೌಡಿಶೀಟರ್(48) ಕೊಲೆಯಾಗಿರುವ ವ್ಯಕ್ತಿಯಾಗಿದ್ದಾನೆ. ಆದರೆ ಸದ್ಯ ಆತನ ಕೊಲೆಯ ಬಗ್ಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.ದುಷ್ಕರ್ಮಿಗಳು ಆತನಿಗೆ ಭೀಕರವಾಗಿ ಕೊಚ್ಚಿಕೊಲೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ವಿದ್ಯಾನಗರ ಪೊಲೀಸ್ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯ ಬಗ್ಗೆ ಮಾತನಾಡಿದ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಅವರು ಕೊಲೆಯ ಬಗ್ಗೆ ಈ ಕ್ಷಣದವರಗೆ ಕಾರಣ ತಿಳಿದುಬಂದಿಲ್ಲ. ಈಬಗ್ಗೆ ಈಗಾಗಲೆ ತಂಡವನ್ನ ರಚನೆ ಮಾಡಲಾಗಿದ್ದು, ಶೀಘ್ರದಲ್ಲಿ ಆರೋಪಿಗಳನ್ನ ಬಂಧಿಸಿ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ

