ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು : ಜೂನ್ 3ಕ್ಕೆ ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರಿಸಲಿದ್ದು, ಇವರ ಜೊತೆಯಲ್ಲಿ ಇನ್ನೂ 8ಮಂದಿ ಪ್ರಮಾಣವಚನ ಸ್ವೀಕರಿಸಲಿದ್ದಾರೆನ್ನಲಾಗಿದ್ದು, ಅವರ ಜೊತೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಮೀನುಗಾರಿಕಾ ಸಚಿವರಾಗಿದ್ದ ಮಂಕಾಳ ವೈದ್ಯ ಅವರು ಮೊದ ಕಂತಿನಲ್ಲೇ ಪ್ರಮಾಣವಚ ಸ್ವೀಕರಿಸುವ ಸಾದ್ಯತೆ ಇದೆ ಎನ್ನಲಾಗಿದೆ..
ಶಿವಕುಮಾರ್ ಸಂಪುಟದಲ್ಲಿ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತದೆಯೋ ಅಥವಾ ಸಿದ್ದರಾಮಯ್ಯ ಸಂಪುಟದಲ್ಲಿದ್ದ ಹಿರಿಯ ಸಚಿವರು ಮುಂದುವರಿಯುತ್ತಾರೋ ಎಂಬುದು ಪ್ರಶ್ನಾರ್ಥಕವಾಗಿ ಉಳಿದಿದೆ. ಮೀನುಗಾರಿಕಾ ಇಲಾಖೆಯ ಸಚಿವರು ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದ ಮಂಕಾಳ ವೈದ್ಯ ಅವರು ಡಿಕೆ ಜೊತೆಯಲ್ಲೆ ಪ್ರಮಾಣವಚನ ಮಾಡಲಿರುವುದು ಬಹುತೇಕ ಪಕ್ಕಾ ಎನ್ನಲಾಗಿದೆ.
ಆದರೆ, ಅಧಿಕೃತ ಪಟ್ಟಿ ಮಂಗಳವಾರದ ಹೊತ್ತಿಗೆ ಅಖೈರುಗೊಳ್ಳಬಹುದೆಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ.
ಶಿವಕುಮಾರ್ ಸಂಪುಟದಲ್ಲಿ ಎಷ್ಟು ಮಂದಿ ಉಪಮುಖ್ಯಮಂತ್ರಿಗಳು ಇರುತ್ತಾರೆ ಎಂಬುದರ ಮೇಲಿಂದ ಮೊದಲ ಕಂತಿನ ಪಟ್ಟಿಯನ್ನ ಇತ್ಯರ್ಥಗೊಳಿಸಲಾಗುತ್ತದೆ ಎನ್ನಲಾಗುತ್ತಿದೆ. ಪ್ರಿಯಾಂಕ್ ಖರ್ಗೆಯವರಿಗೆ ಉಪಮುಖ್ಯಮಂತ್ರಿ ಸ್ಥಾನ ಒಲಿದರೆ ಡಾ. ಜಿ.ಪರಮೇಶ್ವರ್ ಸಂಪುಟ ಸೇರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಆದರೆ, ಕಿರಿಯರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದರಿಂದ ಸಂಪುಟದಲ್ಲಿ ಸಮತೋಲನ ತಪ್ಪುತ್ತದೆ ಎಂದು ಖುದ್ದು ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.,
ಒಂದೊಮ್ಮೆ ಹೈಕಮಾಂಡ್ ಸಂಪುಟದ ಗಾತ್ರವನ್ನು ಹಿಗ್ಗಿಸಲು ಒಪ್ಪಿದರೆ ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ಕೃಷ್ಣಪ್ಪ, ಬಿ.ಕೆ.ಹರಿ ಪ್ರಸಾದ್, ಮಹಿಳಾ ಕೋಟಾದಲ್ಲಿ ರೂಪಕಲಾ ಶಶಿಧರ್ ಅಥವಾ ಲಕ್ಷ್ಮೀ ಹೆಬ್ಬಾಳರ್ಸಂಪುಟ ಸೇರ್ಪ ಡೆಯಾಗಬಹುದು ಎಂದು ಹೇಳಲಾಗುತ್ತಿದೆ.
ಮೊದಲ ಕಂತಿನಲ್ಲಿ ಸಂಭಾವ್ಯ ಸಚಿವರ ಪಟ್ಟಿ
ಡಾ.ಜಿ.ಪರಮೇಶ್ವರ್, ರಾಮಲಿಂಗಾ ರೆಡ್ಡಿ/ಎಚ್.ಕೆ.ಪಾಟೀಲ್ , ಸತೀಶ್ ಜಾರಕಿಹೊಳಿ, ಮಂಕಾಳ ವೈದ್ಯ, ಎಂ.ಬಿ.ಪಾಟೀಲ್ /ಈಶ್ವರ ಖಂಡ್ರೆ, ಯು.ಟಿ.ಖಾದರ್, ಕೃಷ್ಣಬೈರೇಗೌಡ, ಡಾ.ಯತೀಂದ್ರ ಸಿದ್ದರಾಮಯ್ಯ
ಇದನ್ನೂ ಓದಿ/”ಮುಂದಿನ ಸಿಎಂ ಡಿಕೆ ಶಿವಕುಮಾರ್” — ಸಿಎಲ್ಪಿ ಸಭೆಯಲ್ಲಿ ಸಿದ್ದರಾಮಯ್ಯ ಘೋಷಣೆ

