ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಭಾರತೀಯ ಕೃಷಿ ಸಂಶೋದನಾ ಸಂಸ್ಥೆಯು, (IARI) ನವದೆಹಲಿ ಇವರು ನೀಡಲ್ಪಡುವ 2025 ನೇ ಸಾಲಿನ ಇನ್ನೋವೇಟಿವ್ ರೈತ ಪ್ರಶಸ್ತಿಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಾಗಾಲ ಗ್ರಾಮದ ನಾಗರಾಜ ನಾಯ್ಕ ಭಾಜನರಾಗಿದ್ದಾರೆ.

ನಾಗರಾಜ ನಾಯ್ಕ ಇವರಿಗೆ ದೆಹಲಿಯ ಪೂಸಾ ಕೃಷಿ ವಿಜ್ಞಾನ ಮೇಳದಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಕರ್ನಾಟಕದಿಂದ ಈ ಬಾರಿ ಇವರೊಬ್ವರಿಗೆ ಪ್ರಶಸ್ತಿ ಲಭಿಸಿರುವುದು ವಿಶೇಷವಾಗಿದೆ. ಇನೋವೇಟಿವ್ ಪ್ರಶಸ್ತಿ ಪಡೆದ ನಾಗರಾಜ ನಾಯ್ಕ ಇವರು ತಮ್ಮ ಜಮೀನಿನಲ್ಲಿ ಸಮಾರು 600 ಕ್ಕೂ ಹೆಚ್ಚು ಸಾoಪ್ರದಾಯಿಕ ಹಳೆಯ ಭತ್ತದ ತಳಿಗಳನ್ನು ಬೆಳೆಯತ್ತಿದ್ದು, ಇಂತಹ ಭತ್ತದ ತಳಿಗಳನ್ನು ಸಂರಕ್ಷಣಾ ಮಾಡುತಿರುವುದು ಶ್ಲಾಘನೀಯವಾಗಿದೆ .

ಮುಖ್ಯವಾಗಿ ಘಜನಿ ಭೂಮಿಯಲ್ಲಿ ಬೆಳೆಯುವ ಕರಿ ಕಗ್ಗ ಹಾಗೂ ಬಿಳಿ ಕಗ್ಗ ತಳಿಗಳನ್ನು ಉಳಿಸುವ ಕಾರ್ಯ ಮಾಡುತ್ತಿದ್ದಾರೆ. ಇದಲ್ಲದೇ ಇವರು ಹಳೆಯ ಸಂಪ್ರಾದಾಯಿಕ ತಳಿಗಳ ಸಂರಕ್ಷಣೆಗೆ ಬಗ್ಗೆ ರೈತರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸವನ್ನು ಸಹ ಮಾಡುತ್ತಿದ್ದಾರೆ.

ಇದನ್ನೂ ಓದಿ