ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಉತ್ತರಕನ್ನಡ ಜಿಲ್ಲೆಯ ಕರಾವಳಿಯಾದ್ಯಂತ ಇಂದು ಮುಂಜಾನೆ ಭಾರೀ ಪ್ರಮಾಣದಲ್ಲಿ ಮಂಜು ಮುಸುಕಿದ ವಾತಾವರಣ ಕಂಡು ಬಂದಿದೆ.
ಕಳೆದ ಕೆಲದ ದಿನಗಳಿಂದ ಬಿಸಿ ಗಾಳಿ ಉಂಟಾಗುತ್ತಿದ್ದು, ಆದಾಗ್ಯೂ ಚಳಿಗಾಲಕ್ಕಿಂತ ಅಧಿಕ ಪ್ರಮಾಣದಲ್ಲಿ ಇಂದು ಕರಾವಳಿ ತಾಲೂಕಿನ ಕುಮಟಾ,ಅಂಕೋಲಾ,ಕಾರವಾರ ಸೇರಿದಂತೆ ಎಲ್ಲೇಡೆ ದಟ್ಟವಾದ ಮಂಜು ಮುಸಿದ ವಾತಾವಣ ಉಂಟಾಗಿತ್ತು. ಬೆಳಿಗ್ಗೆ 8ಗಂಟೆಯ ತಕನ ಸೂರ್ಯನ ಪ್ರಕಾಶ ಬಿರುತ್ತಿರುವಾಗಲು ಮಂಜು ಕಾಣಿಸಿಕೊಂಡಿದೆ. ನಗರ,ಪಟ್ಟಣ ಪ್ರದೇಶಗಳಲ್ಲಿ ಅಷ್ಟೆ ಅಲ್ಲದೇ ಗ್ರಾಮೀಣ ಭಾಗದಲ್ಲಿ ಮಂಜು ಮಸುಕಿದ ವಾತಾವರಣ ಉಂಟಾಗಿತ್ತು.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚರಿಸುವ ವಾಹನ ಸವಾರರು ದಡ್ಡವಾದ ಮಂಜು ಇರುವ ಕಾರಣ ಸಂಚಾರಿಸಲು ಅಡಚಣೆ ಎದುರಾಗುವಂತಾಗಿತ್ತು. ಚಳಿಗಾಲದಲ್ಲೂ ಕಾಣಿಸಿಕೊಳ್ಳದಷ್ಟು ಮಂಜು ಕಾಣಿಸಿಕೊಂಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಯಿತು.ಅನಿರೀಕ್ಷತವಾಗಿ ಮಂಜು ಉಂಟಾಗಿರುವುದರಿಂದಾಗಿ ಗೇರು,ಮಾವು,ಹಲಸು, ಸೇರಿದಂತೆ ಅನೇಕ ಬೆಳೆಗಳ ಮೇಲೆ ಬೆಳೆಗಳಿಗೆ ಹಾನಿ ಉಂಟಾಗಲಿದೆ. ಪ್ರಾಕೃತಿಕ ವೈಪಲ್ಯದಿಂದಾಗಿ ಈ ವೇಳೆ ಮಂಜು ಉಂಟಾಗಿರಬಹುದು ಎಂದು ತಜ್ಞನರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ
- ಎಲ್ಲರೂ ಸಮಾನರು ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು : ಬ್ರಹ್ಮಾನಂದ ಸರಸ್ವತಿ ಸ್ವಾಮಿಜೀ
- ಕಲ್ಲಮಠದ ಜೀರ್ಣೋದ್ಧಾರ ಸಮಿತಿಗೆ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ನಿಂದ 5ಲಕ್ಷ ದೇಣಿಗೆ
- ಧರ್ಮಸ್ಥಳದ ಸುತ್ತಾ ನೂರಾರು ಶವಗಳು : ನ್ಯಾಯಾಲಯದ ಎದುರು ಬೆಚ್ಚಿ ಬೀಳಿಸುವ ಹೇಳಿಕೆ
- ರಾಮತೀರ್ಥ ಗುಹೆಯಲ್ಲಿ ವಾಸವಿದ್ದ ರಷ್ಯಾ ಮಹಿಳೆ, ಮಕ್ಕಳ ರಕ್ಷಣೆ:ಗೋಕರ್ಣದಲ್ಲಿ ಅಚ್ಚರಿ ಘಟನೆ
.