ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಕಳೆದ ವರ್ಷದ ಮಳೆಗಾಲದ ಸಮಯದಲ್ಲಿ ಮುರಿದಿದ್ದ ಕಾಳಿ ಸೇತುವೆಯನ್ನ ತೆರವು ಮಾಡುವ ವೇಳೆ ಮತ್ತೆ ಮುರಿತ ಉಂಟಾಗಿರುವ ಘಟನೆ ತಡರಾತ್ರಿ ನಡೆದಿದೆ.
ಕಳೆದ ವರ್ಷ ಮಳೆಗಾಲದ ಸಮಯದಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಕಾರವಾರ ಗೋವಾ ಸಂಪರ್ಕಿಸುತ್ತಿದ್ದ ಹಳೆಯ ಕಾಳಿ ಸೇತುವೆ ರಾತ್ರೋ ರಾತ್ರಿ ಮುರಿದು ಬಿದ್ದು ಸೇತುವೆ ಮೇಲೆ ಚಲಿಸುತ್ತಿದ್ದ ಲಾರಿ ಸಹ ನದಿಯಲ್ಲಿ ಮುಳುಗಡೆಯಾಗಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದ, ಬಳಿಕ ಕ್ರೇನ್ ಸಹಾಯದಿಂದ ನದಿಯಲ್ಲಿ ಬಿದ್ದ ಲಾರಿಯನ್ನ ಮೇಲಕ್ಕೆ ಎತ್ತಲಾಗಿತ್ತು.
ಮಳೆಗಾಲದ ನಂತರದಲ್ಲಿ ಮುರಿದುಬಿದ್ದ ಸೇತುವೆಯ ತೆರವು ಮಾಡುವ ಕೆಲಸ ಕಳೆದ ನಾಲ್ಕೈದು ತಿಂಗಳಿಂದ ಆರಂಭಿಸಲಾಗಿದೆ. ಸೇತುವೆಯ ಉಳಿದ ಭಾಗವನ್ನ ಹಂತ ಹಂತವಾಗಿ ತೆರವು ಮಾಡಲಾಗುತ್ತಿದೆ.ಆದರೆ ಮುರಿದು ಬಿದ್ದ ಸೇತುವೆಯ ಒಂದು ಭಾಗ ನಿನ್ನೆ ತಡರಾತ್ರಿ ಏಕಾಏಕಿಯಾಗಿ ಪಿಲ್ಲರ್ ಕೆಳಭಾಗದಲ್ಲಿ ಅರ್ಧ ತುಂಡಾಗಿದೆ. ಇದರಿಂದಾಗಿ ಆ ಸೇತುವೆ ಮೇಲ್ಮುಖವಾಗಿ ನಿಂತುಕೊಂಡಿದೆ. ಒಂದು ವೇಳೆ ಈಗ ಮುರಿದ ಸೇತುವೆಯ ಭಾಗ ಹೊಸ ಸೇತುವೆಗೆ ಅಪ್ಪಳಿಸಿದ್ದರೆ. ಹೊಸ ಸೇತುವೆಗೂ ಸಹ ದೊಡ್ಡ ಮಟ್ಟದ ಅಪಾಯ ಉಂಟಾಗುತ್ತಿತ್ತು.
ಸದ್ಯ ಆ ಸಮಸ್ಯೆಯಿಂದ ಪಾರಾದಂತಾಗಿದೆ. ಆದರೆ ಈಗ ಮುರಿದ ಹಳೆಯ ಸೇತುವೆಯನ್ನ ತೆರವು ಮಾಡುವುದು ಸಹ ಅಷ್ಟೆ ಕಷ್ಟಕರವಾಗಿದ್ದು, ಸ್ವಲ್ಪ ಯಾಮಾರಿದ್ದರು ಹೊಸ ಸೇತುವೆಗೆ ಅಪ್ಪಳಿಸುವ ಸಾಧ್ಯತೆ ಇದೆ..ಈಗಿನಂತೆ ಹೊಸ ಸೇತುವೆ ಮೇಲೆ ವಾಹನ ಸಂಚಾರ ಸುಗಮವಾಗಿ ನಡೆಯುತ್ತಿದೆ.
ಇದನ್ನೂ ಓದಿ
- ಹೈಟೆಕ್ ತಂತ್ರಕ್ಕೆ ಸಿಕ್ಕಿಬಿದ್ದ ಜೂಜುಕೋರರು; ಡ್ರೋಣ್ ಮೂಲಕ ಪತ್ತೆಯಾದ ಇಸ್ಪೀಟ್ ಅಡ್ಡೆ
- “ಸ್ವಾತಂತ್ರ್ಯ ಹೋರಾಟಗಾರ ನಾರಾಯಣ ನಾಯ್ಕ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಗಿಡ ವಿತರಿಸಿದ ಪ್ರಶಾಂತ ನಾಯ್ಕ”
- ಗೃಹಲಕ್ಷ್ಮಿ ಫಲಾನುಭವಿಗಳಿಗೆ ಮರು ಅರ್ಜಿ ಕಡ್ಡಾಯ : ರಾಜ್ಯ ಸರ್ಕಾರದಿಂದ ಮರುಪರಿಶೀಲನೆಗೆ ಸಿದ್ಧತೆ
- “ಕಾಲೇಜು ಶುಲ್ಕ ಕಟ್ಟಲು ಉಳಿಸಿದ್ದ ₹10 ಸಾವಿರ ವಾಪಸ್ ಸಿಗಲಿಲ್ಲ; ಮನನೊಂದು 19ರ ವಿದ್ಯಾರ್ಥಿನಿ ಆತ್ಮಹತ್ಯೆ

