ಮಂಡ್ಯ: ಬೈಕ್ ಮೆಕಾನಿಕ್ ಓರ್ವ ರಾತ್ರಿ ಬೆಳಗಾಗುವುದರ ಒಳಗೆ ಕೋಟ್ಯಾಧಿಪತಿಯಾಗಿದ್ದಾರೆ. 500ರೂಪಾಯಿ ಲಾಟರಿಯಲ್ಲಿ 25 ಕೋಟಿ ರೂ.ಜಾಕ್ಪಾಟ್ ಗೆದಿದ್ದಾರೆ…! ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ಅಲ್ತಾಫ್ ಪಾಷಾ ಅವರು ಕೇರಳದ ಲಾಟರಿಯಲ್ಲಿ 25 ಕೋಟಿ ರೂ.ಬಹುಮಾನ ಗೆದ್ದಿದ್ದಾರೆ.
ಕೇರಳ ಲಾಟರಿಯ ತಿರುವೋಣಂ ಬಂಪರ್ ಬಹುಮಾನ ವಿಜೇತ ವಯನಾಡಿನಿಂದ ಟಿಕೆಟ್ ಖರೀದಿಸಿದ್ದಾರೆ. ಅವರು ಕಳೆದ 15ವರ್ಷಗಳಿಂದ ನಿರಂತರವಾಗಿ ಕೇರಳ ಲಾಟರಿ ಟಿಕೆಟ್ಗಳನ್ನು ಖರೀದಿಸುತ್ತಲ್ಲೇ ಇದ್ದರು. ವಯನಾಡಿನಲ್ಲಿ 500 ರೂ. ಕೊಟ್ಟು ಲಾಟರಿ ಖರೀದಿ ಮಾಡಿದ್ದರು. ಇದೀಗ 25 ಕೋಟಿ ರೂ. ಬಹುಮಾನ ಗೆದ್ದಿದ್ದಾರೆ.
ವಯನಾಡಿನ ಬತ್ತೇರಿಯಲ್ಲಿ ಎನ್ಜಿಎನ್ಆರ್ ಲಾಟರಿ ನಡೆಸುತ್ತಿರುವ ನಾಗರಾಜ ಎಂಬುವವರು ಟಿಕೆಟ್ ಮಾರಾಟ ಮಾಡಿದ್ದಾರೆ. ಒಂದು ತಿಂಗಳ ಹಿಂದೆ ಟಿಕೆಟ್ ಮಾರಾಟ ಮಾಡಿದ್ದರು. ಆದರೆ ಅದನ್ನು ಖರೀದಿಸಿದವರು ಯಾರು ಎಂದು ನೆನಪಿಲ್ಲ. ಬುಧವಾರ (ಅ.9) ಈ ವರ್ಷದ ತಿರುವೋಣಂ ಬಂಪರ್ ಡ್ರಾ ನಡೆಯಿತು.71 ಲಕ್ಷ ಟಿಕೆಟ್ಗಳು ಮಾರಾಟವಾದ ಓಣಂ ಬಂಪರ್ನಲ್ಲಿ 25 ಕೋಟಿ ರೂ. ಮೊದಲ ಬಹುಮಾನ ಗೆದ್ದ ಅದೃಷ್ಟವಂತರು ಯಾರೆಂದು ಹುಡುಕುತ್ತಿದ್ದು, ಕರ್ನಾಟಕ ಮಂಡ್ಯ ಜಿಲ್ಲೆಯ ಪಾಂಡವಪುರ ಮೂಲದ ಅಲ್ತಾಫ್ ಎಂಬುದು ಗೊತ್ತಾಗಿದೆ.
ಗಮನಿಸಿ