ಸುದ್ದಿಬಿಂದು ಬ್ಯೂರೋ
ಜೆಸಿಬಿಗೆ ಸಿಲುಕಿ ಮೂರು ವರ್ಷದ ಪುಟ್ಟಮುಗು ಮೃತಪಟ್ಟ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರಿನ ಹನುಮಾನ್ ನಗರದಲ್ಲಿ ನಡೆದಿದೆ.

ಭೂಮಿಕಾ ರಮೇಶ ಕುಕನೂರ ಎಂಬಾಕೆಯೆ ಮೃತಪಟ್ಟಿರುವ ಮೂರು ವರ್ಷದ ಪುಟ್ಟ ಮಗುವಾಗಿದ್ದಾಳೆ. ಈಕೆ ಮನೆ ಮನೆಯ ಎದುರು ಆಟವಾಡುತ್ತಿದ್ದಳು ಎನ್ನಲಾಗಿದೆ. ಅದೆ‌‌ ಈ ವೇಳೆ ಅವಳ ಮನೆ ಎದುರೇ ರಸ್ತೆ ಬದಿಯಲ್ಲಿ ಪೈಪಲೈನ್‌ಗಾಗಿ ಜೆಸಿಬಿ ಯಂತ್ರದ ಮೂಲಕ ಮಣ್ಣು ತೆಗೆಯಲ ತೆಗೆಯುವಾಗ ಮನೆಯ ಬಳಿ ಆಟ ಆಡುತ್ತಿದ್ದ ಬಾಲಕಿ ಭೂಮಿಕಾ ರಮೇಶ ಕುಕನೂರ ಜೆಸಿಬಿಯ ಮುಂದಿನ ಬಕಿಟಿಗೆ ಸಿಲುಕಿ ಮೃತಪಟ್ಟಿದೆ.ಈ ಘಟನೆಯಿಂದಾಗಿ ಮೃತ ಬಾಲಕಿಯ ಸಂಬಂಧಿಕರ ಆಕ್ರೋಧನ ಮುಗಿಲು ಮುಟ್ಟಿದೆ.

ಘಟನಾ ಸ್ಥಳಕ್ಕೆ ಚಿಕ್ಕೋಡಿಯ ಪಿಎಸ್‌ಐ ಬಸಗೌಡ ನೆರ್ಲಿ,ಎಎಸ್‌ಐ ಮಾರುತಿ ಉಗಾರೆ ಸೇರಿದಂತೆ ಸಿಬ್ಬಂದಿಗಳು ಪರಿಶೀಲಿಸಿದ್ದಾರೆ.

ಇದನ್ನೂ ಓದಿ