suddibindu.in
ಕಾರವಾರ :ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಲ್ಲಿ ಅನಾಥವಾದ 2 ನಾಯಿಯನ್ನು ಸಾಕುವ ಉದ್ದೇಶಕ್ಕಾಗಿ ಕಾರವಾರ ಪೊಲೀಸ್ ವರಿಷ್ಟಾಧಿಕಾರಿಯವರು ತಮ್ಮ ಮನೆಗೆ ಕರೆದೊಯ್ದಿದ್ದಾರೆ.
ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಹಲವರು ಪ್ರಾಣ ಕಳೆದುಕೊಂಡರೆ ನೀರುಪಾಲಾದ ಹೋಟೆಲ್ ಮಾಲಕ ಲಕ್ಷ್ಮಣ ನಾಯ್ಕರ 2 ನಾಯಿ ಅಕ್ಷರಶಃ ಅನಾಥವಾಗಿತ್ತು. ಶ್ವಾನ ಪ್ರೀತಿಗೆ ಯಾರೂ ಸಾಟಿಯಲ್ಲ ಎಂಬಂತೆ ಈ ಎರಡೂ ನಾಯಿ ದುರಂತ ಸ್ಥಳದಲ್ಲೇ ತನ್ನ ಮಾಲಕನಿಗಾಗಿ ಪರಿತಪಿಸುತ್ತಲೇ ಇತ್ತು. ಸ್ಥಳಕ್ಕೆ ಬಂದವರು ನಾಯಿಯ ಪ್ರೀತಿ ಕಂಡು ಬಿಸ್ಕೀಟ್ ಮತ್ತೀತರ ತಿಂಡಿ, ತಿನಿಸು ನೀಡಿ ಹೋಗುತ್ತಿದ್ದರಾದರೂ ನಾಯಿಗಳಿಗೆ ಅನಾಥ ಪ್ರಜ್ಞೆ ಕಾಡುತ್ತಲೇ ಇತ್ತು.
ಇದನ್ನೂ ಓದಿ
- ಆರ್ಟಿಐ ಹೆಸರಿನಲ್ಲಿ ಕೋಟಿ ಹಣದ ಬೇಡಿಕೆ: ಮುಂಡಗೋಡ-ಹುಬ್ಬಳ್ಳಿ ಗ್ಯಾಂಗ್ ಪೊಲೀಸ್ ಬಲೆಗೆ..!
- ಐದು ವರ್ಷ ಅಪಘಾತವಿಲ್ಲ.!ಭಟ್ಕಳದ ಚಾಲಕ ರಾಮಚಂದ್ರ ನಾಯ್ಕ ಅವರಿಗೆ ಬೆಳ್ಳಿ ಪದಕದ ಗೌರವ
- ನ್ಯಾಯ ಸಿಗದಿದ್ದರೆ ಬಸ್ಸ್ಟ್ಯಾಂಡ್ನಲ್ಲಿ ಧರಣಿ : ಆಟೋ ಚಾಲಕರಿಂದ ಎಚ್ಚರಿಕೆ
ಕೊನೆಗೂ ನಾಯಿ ಪ್ರೀತಿಗೆ ಸೋತ ಕಾರವಾರ ಪೊಲೀಸ್ ವರಿಷ್ಟಾಧಿಕಾರಿ ನಾಯಿಯನ್ನು ತಾವೇ ಸಾಕುವ ಉದ್ದೇಶಕ್ಕಾಗಿ ತಮ್ಮ ಮನೆಗೆ ಕರೆದೊಯಿದ್ದಾರೆ. ಪೊಲೀಸ್ ವರಿಷ್ಟಾಧಿಕಾರಿಯ ಮಾನವೀಯತೆಯನ್ನು ಶಿರೂರು ಸುತ್ತಮುತ್ತಲಿನ ಜನತೆ ಕೊಂಡಾಡಿದ್ದಾರೆ.







