ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ರಾಜ್ಯ ಸರ್ಕಾರ ಅರಣ್ಯ ಇಲಾಖೆಯಲ್ಲಿ ಭಾರಿ ಆಡಳಿತಾತ್ಮಕ ಸರ್ಜರಿ ನಡೆಸಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಟ್ಟು 40 ವಲಯ ಅರಣ್ಯಾಧಿಕಾರಿಗಳನ್ನು (RFO) ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಸಾರ್ವಜನಿಕ ಹಿತದೃಷ್ಟಿ ಹಾಗೂ ಆಡಳಿತಾತ್ಮಕ ಕಾರಣಗಳಿಂದ ಈ ವರ್ಗಾವಣೆ ಜಾರಿಗೊಂಡಿದ್ದು,ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಿಂದ ಆದೇಶ ಪ್ರಕಟಿಸಲಾಗಿದೆ.ಈ ವರ್ಗಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ 19 ವಲಯ ಅರಣ್ಯಾಧಿಕಾರಿಗಳಿಗೂ ಸ್ಥಳಾಂತರ ಆದೇಶ ಹೊರಬಿದ್ದಿದ್ದು, ಶಿರಸಿ ವಿಭಾಗದ ಐವರು ಅಧಿಕಾರಿಗಳಿಗೂ ಹೊಸ ಜವಾಬ್ದಾರಿ ನೀಡಲಾಗಿದೆ.
ಶಿರಸಿ ವಲಯದ ಆರ್ಎಫ್ಒ ಗಿರೀಶ ನಾಯ್ಕ ಅವರನ್ನು ಹುಲೇಕಲ್ ವಲಯಕ್ಕೆ, ಹುಲೇಕಲ್ ವಲಯದ ಶಿವಾನಂದ ನಿಂಗಾಣಿ ಅವರನ್ನು ಕ್ಯಾದಗಿ ವಲಯಕ್ಕೆ, ಜಾನ್ಮನೆ ವಲಯದ ಉಷಾ ಕಬ್ಬೇರ ಅವರನ್ನು ಸಿದ್ದಾಪುರ ವಲಯಕ್ಕೆ, ಬನವಾಸಿ ವಲಯದ ಭವ್ಯಾ ನಾಯ್ಕ ಅವರನ್ನು ಶಿರಸಿ ವಲಯಕ್ಕೆ ಹಾಗೂ ಗೇರುಸೊಪ್ಪ ವಲಯದ ಕಾರ್ತಿಕ ಕಾಂಬಳೆ ಅವರನ್ನು ಬನವಾಸಿ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ.
ಸಿದ್ದಾಪುರದ ಅಜಯಕುಮಾರ ಅವರನ್ನು ಸಾಗರ ವಲಯಕ್ಕೆ,ಶಿರಸಿ ಸಾಮಾಜಿಕ ಅರಣ್ಯದ ಆರ್ಎಫ್ಒ ಮಾರುತಿ ನಾಯ್ಕ ಅವರನ್ನು ಮಂಚಿಕೇರಿ ವಲಯಕ್ಕೆ, ಮಂಚಿಕೇರಿ ವಲಯದ ಬಸವರಾಜ ಬೋಜಳ್ಳಿ ಅವರನ್ನು ಇಡಗುಂದಿ ವಲಯಕ್ಕೆ ಹಾಗೂ ಇಡಗುಂದಿಯ ಎಂ.ಎಚ್. ನಾಯ್ಕ ಅವರನ್ನು ಯಲ್ಲಾಪುರ ವಲಯಕ್ಕೆ ನಿಯೋಜಿಸಲಾಗಿದೆ.
ಯಲ್ಲಾಪುರದ ಜಿ.ವಿ. ನರೇಶ್ ಅವರನ್ನು ಬಂಡಿಪುರಕ್ಕೆ, ಕತಗಾಲದ ಪ್ರೀತಿ ನಾಯ್ಕ ಅವರನ್ನು ಹೊನ್ನಾವರ ಸಾಮಾಜಿಕ ಅರಣ್ಯ ವಿಭಾಗಕ್ಕೆ, ಅಲ್ಲಿದ್ದ ಎಸ್.ವಿ. ಬಂಟರು ಅವರನ್ನು ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ ಮಾಡಲಾಗಿದೆ.
ರಾಮನಗುಳಿ ವಲಯದ ಸುರೇಶ್ ನಾಯಕ ಅವರನ್ನು ಹೀರೇಗುತ್ತಿ ವಲಯಕ್ಕೆ, ಅಂಕೋಲಾದ ಪ್ರಮೋದ ನಾಯಕ ಅವರನ್ನು ಹೊನ್ನಾವರ ವಲಯಕ್ಕೆ, ಹೊನ್ನಾವರದ ಸವಿತಾ ದೇವಾಡಿಗ ಅವರನ್ನು ಕುಮಟಾ ವಲಯಕ್ಕೆ ಹಾಗೂ ಕುಮಟಾದ ಪ್ರವೀಣ ನಾಯಕ ಅವರನ್ನು ದಾಂಡೇಲಿ ಡಿಪೋಗೆ ವರ್ಗಾವಣೆ ಮಾಡಲಾಗಿದೆ.
ಇದೇ ವೇಳೆ ದಾಂಡೇಲಿಯ ಎನ್.ಎಲ್. ನದಾಫ ಅವರನ್ನು ಹಳಿಯಾಳ ವಲಯಕ್ಕೆ, ಹಳಿಯಾಳದ ಬಸವರಾಜ ಪಣಸೋಲಿ ಅವರನ್ನು ವನ್ಯಜೀವಿ ವಿಭಾಗಕ್ಕೆ ಹಾಗೂ ಪಣಸೋಲಿಯ ರವಿಕಿರಣ ಸಂಪಗಾವಿ ಅವರನ್ನು ಜೊಯಿಡಾ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ.
ಸರ್ಕಾರದ ಆದೇಶದಂತೆ ವರ್ಗಾವಣೆಗೊಂಡ ಎಲ್ಲ ಅಧಿಕಾರಿಗಳು ತಮ್ಮ ಹೊಸ ಕರ್ತವ್ಯ ಸ್ಥಳಗಳಲ್ಲಿ ತಕ್ಷಣವೇ ಹಾಜರಾಗಬೇಕು. ಕರ್ತವ್ಯಕ್ಕೆ ಹಾಜರಾದ ದಿನವೇ ಇ-ಮೇಲ್ ಮೂಲಕ ವರದಿ ಸಲ್ಲಿಸುವಂತೆ ಸೂಚಿಸಲಾಗಿದ್ದು, ನಿಗದಿತ ಅವಧಿಯಲ್ಲಿ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.



