suddibindu.in
ಕುಮಟಾ: ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡಕುಸಿತ ಉಂಟಾದ ಬೆನ್ನಲ್ಲೇ ಇದೀಗ ಬರ್ಗಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿದೆ.
ಬೆಳ್ಳಿಗೆ ನಾಲ್ಕು ಗಂಟೆ ಸುಮಾರಿಗೆ ಬರ್ಗಿ ಘಟಬೀರ ದೇವಸ್ಥಾನದ ಸಮೀದಲ್ಲಿ ಗುಡ್ಡಕುಸಿತ ಉಂಟಾಗಿ ಹೆದ್ದಾರಿಯಲ್ಲಿ ಬಿದ್ದಿದೆ.ಇದರಿಂದಾಗಿ ಅಂಕೋಲಾ ಕುಮಟಾ ಬಳಿ ವಾಹನ ಸಂಚಾರ ಬಂದ್ ಆಗಿದ್ದು, ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ
- ಕೆರೆಯಲ್ಲಿ ಮುಳುಗಿ ಸಹೋದರರಿಬ್ಬರ ಸಾವು
- ಮಹಿಳೆಯರ ಸ್ವಾವಲಂಬನೆಗೆ ರೋಟರಿ ನೆರವು ಶ್ಲಾಘನೀಯ : ಶಾಸಕ ಭೀಮಣ್ಣ ನಾಯ್ಕ
- ಚಾಂಪಿಯನ್ ಆಗಿ ಹೊರಹೊಮ್ಮಿದ ರಂಜನ್ ಚಾಲೆಂಜರ್ಸ್ ಭಟ್ಕಳ
ಸ್ಥಳಕ್ಕೆ ಐಆರ್ಬಿ ಕಂಪನಿಯ ಜೆಸಿಬಿಯಿಂದ ಇದೀಗ ತೆರವು ಕಾರ್ಯ ಮುಂದುವರೆದಿದ್ದು, ವಾಹನ ಸವಾರರಲ್ಲಿ ಆತಂಕ ಹೆದ್ದಾಗಿದೆ.
ಇನ್ನೂ ಅಂಕೋಲಾ ತಾಲೂಕಿನ ಶಿರೂರು ಗುಡ್ಡಕುಸಿತದಲ್ಲಿ ಮೃತಪಟ್ಟಿದ್ದ ಪುಟ್ಟ ಬಾಲಕಿ ಅವಾಂತಿಕ ಮೃತ ದೇಹ ಇಂದು ಬೆಳಿಗ್ಗೆ ಗೋಕರ್ಣ ಸಮೀಪದಲ್ಲಿ ಪತ್ತೆಯಾಗಿದೆ. ಶಿರೂರು ಬಳಿ ಹೆದ್ದಾರಿಯಲ್ಲಿನ ಮಣ್ಣು ತೆರವು ಕಾರ್ಯಚರಣೆ ಇಂದು ಬೆಳಿಗ್ಗೆಯಿಂದ ಮುಂದುವರೆದಿದೆ.




