suddibindu.in
ಭಟ್ಕಳ : ವ್ಯಕ್ತಿ ಓರ್ವ ಕುಡಿದ ಮತ್ತಿಲ್ಲ ರೈಲ್ವೆ ಪ್ಲಾಟ್ ಫಾರ್ಮ್ ಬಳಿ ಕುಳಿತು ಹುಚ್ಚಾಟ ಮೆರೆಯುತ್ತಿದ್ದ ವ್ಯಕ್ತಿ ಓರ್ವನಿಗೆ ರೈಲ್ವೆ ತಗುಲಿ ಆತನ ಕೈ ಕಟ್ ಆಗಿರುವ ಘಟನೆ ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ದೇವಿದಾಸ್ ಮೊಗೇರ ಎಂಬಾತ ಭಟ್ಕಳ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲಿ ಅಡ್ಡಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ರೈಲೆ ತಲಿಸುವಾಗಲು ಪ್ಲಾಟ್ಫಾರ್ಮ್ ಬಳಿ ತೂರಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಮುರುಡೇಶ್ವರದಿಂದ ಬೆಂಗಳೂರಿಗೆ ಚಲಿಸುವ ರೈಲು ಭಟ್ಕಳದ ಪ್ಲಾಟ್ ಫಾರ್ಮ್ ಮೇಲೆ ನಿಂತಿದ್ದ ದೇವುದಾಸ್ ಎಂಬಾತನಿಗೆ ತಗುಲಿದೆ.
ಇದನ್ನೂ ಓದಿ
- ಮಹಿಳೆಯರ ಸ್ವಾವಲಂಬನೆಗೆ ರೋಟರಿ ನೆರವು ಶ್ಲಾಘನೀಯ : ಶಾಸಕ ಭೀಮಣ್ಣ ನಾಯ್ಕ
- ಚಾಂಪಿಯನ್ ಆಗಿ ಹೊರಹೊಮ್ಮಿದ ರಂಜನ್ ಚಾಲೆಂಜರ್ಸ್ ಭಟ್ಕಳ
- ಪಿಎಸ್ಐ ಖಾದರ್ ಬಾಷಾ ವಿರುದ್ಧ ಅಕ್ರಮ ದಂಡ ವಸೂಲಿ ಆರೋಪ : ಕ್ರಮಕ್ಕೆ ಮಂಜುನಾಥ ನಾಯ್ಕ ಆಗ್ರಹ
ಪರಿಣಾಮ ಈತ ರೈಲ್ವೆ ಕೆಳಬಾಗದಲ್ಲಿ ಸಿಲುಕಿ ಕೊಂಡಿದ್ದಾನೆ.ಇದರಿಂದಾಗಿ ಆತನ ಕೈ ಕಟ್ ಆಗಿದ್ದು, ಆತನ ದೇಹ ಹಾಗೂ ಕೈ ಒಂದೊಂದು ಕಡೆ ಛೀಧ್ರವಾಗಿ ಬಿದಿದ್ಧೆ. ಆತನಿಗೆ ಭಟ್ಕಳ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.




