suddibindu.in
ಭಟ್ಕಳ : ವ್ಯಕ್ತಿ ಓರ್ವ ಕುಡಿದ ಮತ್ತಿಲ್ಲ ರೈಲ್ವೆ ಪ್ಲಾಟ್ ಫಾರ್ಮ್ ಬಳಿ ಕುಳಿತು ಹುಚ್ಚಾಟ ಮೆರೆಯುತ್ತಿದ್ದ ವ್ಯಕ್ತಿ ಓರ್ವನಿಗೆ ರೈಲ್ವೆ ತಗುಲಿ ಆತನ ಕೈ ಕಟ್ ಆಗಿರುವ ಘಟನೆ ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ದೇವಿದಾಸ್ ಮೊಗೇರ ಎಂಬಾತ ಭಟ್ಕಳ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲಿ ಅಡ್ಡಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ರೈಲೆ ತಲಿಸುವಾಗಲು ಪ್ಲಾಟ್ಫಾರ್ಮ್ ಬಳಿ ತೂರಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಮುರುಡೇಶ್ವರದಿಂದ ಬೆಂಗಳೂರಿಗೆ ಚಲಿಸುವ ರೈಲು ಭಟ್ಕಳದ ಪ್ಲಾಟ್ ಫಾರ್ಮ್ ಮೇಲೆ ನಿಂತಿದ್ದ ದೇವುದಾಸ್ ಎಂಬಾತನಿಗೆ ತಗುಲಿದೆ.
ಇದನ್ನೂ ಓದಿ
- ಪರಿಸರ ಸಂರಕ್ಷಣೆಗೆ ವಿದ್ಯಾರ್ಥಿಗಳ ಪ್ರತಿಜ್ಞೆ: ಬರ್ಗಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
- ಉತ್ತರ ಕನ್ನಡ ಸೇರಿ ಐದು ಜಿಲ್ಲೆಗಳಿಗೆ ರೆಡ್ ಅಲರ್ಟ್: ಜೂನ್ 9-10ರಂದು ಭಾರೀ ಮಳೆ ಸಾಧ್ಯತೆ
- Gokaran/ಗೋಕರ್ಣ ರಸ್ತೆಯಲ್ಲಿ ಪ್ರವಾಸಿಗರ ವಾಹನದ ಮೇಲೆ ಬಿದ್ದ ಬೃಹತ್ ಮರ : ಪ್ರಾಣಾಪಾಯದಿಂದ ಪಾರು
ಪರಿಣಾಮ ಈತ ರೈಲ್ವೆ ಕೆಳಬಾಗದಲ್ಲಿ ಸಿಲುಕಿ ಕೊಂಡಿದ್ದಾನೆ.ಇದರಿಂದಾಗಿ ಆತನ ಕೈ ಕಟ್ ಆಗಿದ್ದು, ಆತನ ದೇಹ ಹಾಗೂ ಕೈ ಒಂದೊಂದು ಕಡೆ ಛೀಧ್ರವಾಗಿ ಬಿದಿದ್ಧೆ. ಆತನಿಗೆ ಭಟ್ಕಳ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.




