suddibindu.in
ವಿಜಯಪುರ : ಹೆದ್ದಾರಿಯಲ್ಲಿ ಕ್ಯಾಂಟರ್ ವಾಹನ ತಡೆದು ಹಣ ದರೋಡೆ ಮಾಡಿದ ಐವರು ಆರೋಪಿಗಳನ್ನ ವಿಜಯಪುರ ಪೊಲೀಸರು ಬಂಧಿಸಿದ್ದಾರೆ.
.
- ಮುರುಡೇಶ್ವರ ಬಳಿ ಭೀಕರ ರಸ್ತೆ ಅಪಘಾತ : ಬೈಕ್ ಸವಾರ ಸ್ಥಳದಲ್ಲೇ ಸಾವು
- ಕರ್ನಾಟಕದ ಬರದ ಸಂಕಷ್ಟಕ್ಕೆ ಕೇಂದ್ರದ ನೆರವು ಕೋರಿದ ಸಿಎಂ ಡಿ ಕೆ ಶಿವಕುಮಾರ : ಪ್ರಧಾನಿ ಮೋದಿಗೆ ಪತ್ರ
- “ಶಿರಸಿ–ಮುಂಡಗೋಡ–ಸೌವದತ್ತಿ ನೂತನ ಬಸ್ ಸೇವೆಗೆ ಶಾಸಕ ಶಿವರಾಮ ಹೆಬ್ಬಾರ್ ಚಾಲನೆ
ದರೋಡೆ ಪ್ರಕರಣದಲ್ಲಿ ಸುನೀಲ ವಡ್ಡರ (21), ಶಿವಾನಂದ ದಳವಾಯಿ 21) ಮಹಾಂತೇಶ ತಳವಾರ (35), ಧರೇಶ ದಳವಾಯಿ (21), ಶಿವಪ್ಪ ಮಾಶ್ಯಾಳ (39), ಬಂಧಿತ ಆರೋಪಿಗಳಾಗಿದ್ದಾರೆ. ಇನ್ನೂ ಚಂದ್ರಕಾಂತ ಕುಂಬಾರ ಅವರಿಗೆ ಸಂಬಂಧಿಸಿದ ಹತ್ತಿಯನ್ನು ಧಾರವಾಡ ಜಿಲ್ಲೆಯ ಅಮೀನ ಬಾವಿಯಲ್ಲಿರುವ ಅನೀಲಕುಮಾರ & ಕಂಪನಿಗೆ ಮಾರಾಟ ಮಾಡಿದ 32,29,364 ಹಣವನ್ನು ತೆಗೆದುಕೊಂಡು ಊರಿಗೆ ತೆರಳುವ ಸಂದರ್ಭದಲ್ಲಿ ಕೋಲ್ಹಾರ ಹೊರಭಾಗದಲ್ಲಿ ವಾಹನ್ ಅಡ್ಡಗಟ್ಟಿ ದರೋಡೆ ಮಾಡಿದ್ದರು.
ಇನ್ನೂ ಕೃತ್ಯದಲ್ಲಿ ಶಾಮೀಲಿದ್ದ ಕ್ಯಾಂಟರ್ ಚಾಲಕ ಸೇರಿ ಒಟ್ಟು ಐವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿತರಿಂದ ಕೃತ್ಯಕ್ಕೆ ಬಳಸಿದ ವಾಹನ, ಬಡಿಗೆ, ರಾಡ್ ಹಾಗೂ ಸುಲಿಗೆಯಾದ ಹಣದ ಪೈಕಿ 31,04,364 ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳಿಗೆ ನ್ಯಾಯಾಂಗ ಇಂಧನಕ್ಕೆ ಒಪ್ಪಿಸಲಾಗಿದೆ..




