ಸುದ್ದಿಬಿಂದು ಬ್ಯೂರೋ ವರದಿ

ಭಟ್ಕಳ : ಬೈಕ್‌ ಹಾಗೂ ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮುರುಡೇಶ್ವರದ ಬಸ್ಥಿಬಳಿ ನಡೆದಿದೆ, ಐಆರ್‌ ಬಿ ಕಂಪನಿಯ ಅವೈಜ್ಞಾನಿಕರ ಕಾಮಗಾರಿ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಅಪಘಾತದಲ್ಲಿ ಕೃಷ್ಣಾ ನಾಯ್ಕ ಎಂಬುವವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಬೈಕ್‌ ಸವಾರ ಲಾರಿ ಚಕ್ರದ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿ ತೆರ್ನಮಕ್ಕಿ ಸಬಾತಿ ನಿವಾಸಿ ಎನ್ನಲಾಗಿದೆ. ಇವರು ಸಾರದಹೋಳೆ ನಾಮಧಾರಿ ಹೋಬಳಿಯ ಹಾಲಿ ಸದ್ಯರಾಗಿರದ್ದರು ಎನ್ನಲಾಗಿದೆ. ಸ್ಥಳಕ್ಕೆ ಮುರುಡೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಿದ್ದಾರೆ. ಇನ್ನೂ ಅಪಘಾತಕ್ಕೆ ಐಆರ್‌ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿ ಎಂದು ಆರೋಪಿಸಿರುವ ಸ್ಥಳಿಯರು ಆಕ್ರೋಶ ಹೊರಹಾಕಿದ್ದಾರೆ.