suddibindu.in
ಶಿವಮೊಗ್ಗ-ಮಟ್ಕಾ ದಂಧೆ ನಡೆಸಲು ಲಕ್ಷಾಂತರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ASI ಓರ್ವ ಲಕ್ಷಾಂತರ ‌ರೂಪಾಯಿ ಲಂಚ‌ ಪಡೆಯುತ್ತಿರುವಾಗ ಲೋಕಾಯುಕ್ತರು ದಾಳಿ ನಡೆಸಿರುವ ವೇಳೆ ಸಿಕ್ಕಿಬಿದ್ದಿದ್ದಾರೆ.

ಸೈಬರ್ ಕ್ರೈಂ ಪೊಲೀಸ್ ಠಾಣೆಯ ಎಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರೆಹಮಾನ್ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಎಎಸ್ಐ ಆಗಿದ್ದಾರೆ. ಆರ್ ಎಂ ಎಲ್ ನಗರದಲ್ಲಿರುವ ಅವರ ಮನೆಯ ಬಳಿಯೇ ರಫಿಕ್ ಎಂಬುವರಿಂದ 1ಲಕ್ಷ ರೂ ಲಂಚ ಪಡೆಯುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಎಎಸ್ ಐ ರೆಹಮಾನ್ ಲೋಕಾಯುಕ್ತರ ಬಲೆಗೆ ಬಿಕ್ಕಿ ಬಿದ್ದಿದ್ದಾರೆ.

ಇದನ್ನೂ ಓದಿ

ಲೋಕಾಯುಕ್ತ ಎಸ್ ಪಿ ವಾಸುದೇವ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಮಟ್ಕಾ ದಂಧೆ ನಡೆಸುವವರಿಂದ ರೂ.1,20,000 ಹಣಕ್ಕೆ ರೆಹಮಾನ್ ಬೇಡಿಕೆ ಇಟ್ಟಿದ್ದು ಇಂದು ಒಂದು ಲಕ್ಷ ರೂ ಹಣಪಡೆಯುವ ವೇಳೆ ಲೋಕಾಯುಕ್ತ ಅಧಿಕ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದು ಒಂದು ವಿಶೇಷ ಪ್ರಕರಣವಾಗಿದೆ. ನಗರದಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗಳಾದ ಓಸಿ, ಮಟ್ಕಾ ದಂಧೆಗಳಲ್ಲಿ ಪೊಲೀಸರ ಶಾಮೀಲು ಆರೋಪ ಕೇಳಿ ಬರುತ್ತಿದೆ..

ಈ ಠಾಣೆಯಲ್ಲಿ ಒನ್ ಟು ಡಬಲ್

ಇದೇ ರೀತಿ ಉತ್ತರಕನ್ನಡ ಜಿಲ್ಲೆಯ ಕರಾವಳಿ ತಾಲೂಕಿನ ಬಾರ್ಡೋಲಿ ಠಾಣೆಯ ಆದಿಕಾರಿಯೊಬ್ಬರು ತನ್ನ ವ್ಯಾಪ್ತಿಯಲ್ಲಿ ನಡೆಯವ ಪ್ರತಿಯೊಂದು ಅಕ್ರಮ ದಂಧೆ ನಡೆಸಲು ಒನ್ ಟು ಡಬಲ್ ಬೇಡಿಕೆ ಇಡುತ್ತಿರುವ ವಿಚಾರ ವ್ಯಾಪಕ ಚರ್ಚೆಯಾಗುತ್ತಿದೆ..ಈ ಬಗ್ಗೆ ಇನ್ನಷ್ಟು ದಾಖಲೆಯೊಂದಿಗೆ ಮುಂದಿನ ದಿನದಲ್ಲಿ ಜನರ ಮುಂದೆ ಒಂದೊಂದಾಗಿ ಬಿಚ್ಚಿಡಲಾಗುವುದು