Suddibindu. In
ಸಿದ್ದಾಪುರ : ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿ ಓರ್ವ ಓಸಿ ಮಟ್ಕಾ ತೆಗೆದುಕೊಳ್ಳುತ್ತಿರುವ ವೇಳೆ ದಾಳಿ ನಡೆಸಿದ ಪೊಲೀಸರು(Police)ಓಸಿ ಮಟ್ಕಾ ತೆಗೆದುಕೊಳ್ಳುತ್ತಿದ್ದವನ್ನ ವಶಕ್ಕೆ ಪಡೆದು 615ರೂಪಾಯಿ(Rupee)ಹಣವನ್ನ ವಶಕ್ಕೆ ಪಡೆದಿದ್ದಾರೆ.
ಜನತಾ ಕಾಲೋನಿಯ(Janata Colony) ಸೋಮಶೇಖರ ಎಂಬಾತ ಸಾರ್ವಜನಿಕರ ಸ್ಥಳದಲ್ಲಿ ನಿಂತುಕೊಂಡು. ರಸ್ತೆಯಲ್ಲಿ(on the road)ಓಡಾಡುವ ಜನರನ್ನ ತನ್ನ ಬಳಿ ಕರೆದುಕೊಂಡು ಒಂದು ರೂಪಾಯಿಗೆ 80ರೂಪಾಯಿ ಕೊಡುವುದಾಗಿ ಹೇಳಿ ಓಸಿ ಮಟ್ಕಾ ತೆಗೆದುಕೊಳ್ಳುತ್ತಿದ್ದ. ಈ ವೇಳೆಯಲ್ಲೇ ಪೊಲೀಸರು ದಾಳಿ ನಡೆಸಿದ್ದಾರೆ.
ಇನ್ನೂ ಕೊಂಡ್ಲಿ ಮಾರಿಕಾಂಬಾ ನಗರದಲ್ಲಿ ಮಂಜುನಾಥ ಎಂಬಾತ ಸಹ ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟ್ಕಾ ತೆಗೆದುಕೊಳ್ಳುತ್ತಿರುವಾಗ ಸಿದ್ದಾಪುರ(Police attack) ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಓಸಿ ತೆಗೆದುಕೊಳ್ಳುತ್ತಿದ್ದ ಮಂಜುನಾಥ ಬಳಿ ಇದ್ದ 550ರೂಪಾಯಿ ಹಾಗೂ ಓಸಿ ಆಟಕ್ಕೆ ಬಳಸಲಾದ ಸಲಕರಣೆಗಳನ್ನ ವಶಕ್ಕೆ ಪಡೆದು ಇಬ್ಬರ ವಿರುದ್ದ ಕರ್ನಾಟ ಪೊಲೀಸ್ ಕಾಯ್ದೆಯಡಿಯಲ್ಲಿ(Karnataka Police Act)ಪ್ರಕರಣ(case) ದಾಖಲಿಸಿಕೊಂಡಿದ್ದಾರೆ.
Sirsi: ಶಿರಸಿಯಲ್ಲೂ ದಾಳಿ
ಶಿರಸಿಯ ಗಣೇಶನಗರದ ಶ್ರೀಮಾರುತಿ ದೇವಸ್ಥಾನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಒಸಿ ಆಡಿಸುತ್ತಿದ್ದ ಮಹಮ್ಮದ್ ರಫಿಕ್ ಮಹಮ್ಮದ್ ಶೇಖ್ ಮೇಲೆ ಪ್ರಕರಣ ದಾಖಲಿಸಿದ ಪೋಲಿಸರು.ಆರೋಪಿತನಿಂದ 1500 ರೂ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿರುವ ಎ ಎಸ್ ಆಯ್ ರೋಶನ್ ನೇತ್ರಕರ್. ಪಿಎಸ್ಆಯ್ ನಾಗಪ್ಪ ಬಿ.ನೇತ್ರದಲ್ಲಿ ದಾಳಿ ನಡೆಸಲಾಗಿದೆ.