Suddibindu.in
Uppinangadi:ಉಪ್ಪಿನಂಗಡಿ: ವಿದ್ಯಾರ್ಥಿನಿ(Student)ಮಲಗಿದ್ದಲ್ಲೇ‌ ಹೃದಯಾಘಾತದಿಂದ ‌ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ 34 ನೆಕ್ಕಿಲಾಡಿ ಗ್ರಾಮದ ಕರ್ವೇಲು ಬಳಿ ನಡೆದಿದೆ.

Businessman)ಉದ್ಯಮಿ ದಾವೂದ್‌ ಅವರ ಪುತ್ರಿ,ಪ್ರತಿಭಾನ್ವಿತ ಕಾಲೇಜು ವಿದ್ಯಾರ್ಥಿನಿಯಾಗಿರುವ ಹಫೀಝಾ (17)ಮೃತ ವಿದ್ಯಾರ್ಥಿನಿ ಎಂಬಾಕೆಯೆ ಹೃದಯಾಘಾತದಿಂದ ಮೃತಪಟ್ಟವಳಾಗಿದ್ದಾಳೆ.

ಉಪ್ಪಿನಂಗಡಿಯ ಇಂಡಿಯನ್‌ ಸ್ಕೂಲ್‌ನ (Indian School,)ಹಳೆವಿದ್ಯಾರ್ಥಿಯಾಗಿದ್ದು,ಪ್ರಸಕ್ತ ಪುತ್ತೂರಿನ ಸೈಂಟ್‌ ಫಿಲೋಮಿನಾ ಕಾಲೇಜಿನ(Second PUC) ದ್ವಿತೀಯ ಪಿಯುಸಿ ವಿಜ್ಞಾನ(Science)ವಿಭಾಗದಲ್ಲಿ ಕಲಿಯುತ್ತಿದ್ದಳು, ತಡರಾತ್ರಿ ವರೆಗೆ ಅಭ್ಯಾಸ ನಿರತಳಾಗಿದ್ದ ವಿದ್ಯಾರ್ಥಿನಿ ಬಳಿಕ ನಿದ್ರಿಸಿದ್ದು, ಇಂದು ಬೆಳಗ್ಗೆ ಎದ್ದೇಳದೇ ಇರುವುದನ್ನು ಕಂಡು ಎಬ್ಬಿಸಲು ಹೋದಾಗ ಮೃತಪಟ್ಟಿರುವುದು ಕಂಡುಬಂದಿದೆ.