ಚಿಕ್ಕಮಗಳೂರು: ವೈದ್ಯೋ ನಾರಾಯಣ ಹರಿ ಅಂತಾರೆ.. ಅದರೆ ಇಲ್ಲೊಬ್ಬ ಬೇಜವಾಬ್ದಾರಿ ವೈದ್ಯ  ಆಪರೇಷನ್ ಥಿಯೇಟರ್ ಗೆ ಕುಡಿದ ಮತ್ತಿನಲ್ಲಿ ಬಂದು ಆಪರೇಷನ್ ಬೆಡ್ ಮೇಲೆಯೇ ಮಲಗಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ..

ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಸಂತಾನಹರಣ ಆಪರೇಷನ್ ಕ್ಯಾಂಪ್ ಏರ್ಪಾಡು ಮಾಡಲಾಗಿತ್ತು.10ಕ್ಕೂ ಹೆಚ್ಚು ಮಹಿಳೆಯರು ಬೆಳಗ್ಗೆ 8 ಗಂಟೆಗೆ ಆಸ್ಪತ್ರೆಗೆ ಬಂದಿದ್ದರು. ಆದರೆ ಕೊಪ್ಪ ಸರ್ಕಾರಿ ಆಸ್ಪತ್ರೆ ವೈದ್ಯ ಬಾಲಕೃಷ್ಣ ಬಂದಿದ್ದು ಆದರೆ ಈ ವೈದ್ಯ ಮಹಾಶಯ ಆಸ್ಪತ್ರೆಗೆ ಬರುವಾಗಲೇ  ಕುಡಿದ ಮತ್ತಿನಲ್ಲಿ ತೂರಾಡುತ್ತಾ ಆಸ್ಪತ್ರೆಗೆ ಬಂದಿದ್ದ ವೈದ್ಯ ಬಾಲಕೃಷ್ಣ ಸಂತಾನಹರಣ ಚಿಕಿತ್ಸೆ ಮಾಡಬೇಕಾದ ಈ ವೈದ್ಯ ಆಪರೇಷನ್ ಬೆಡ್ ಮೇಲೆ ಪುಲ್ ಟೈಟ್ ಮಲಗಿದ್ದಾನೆ.

ಇನ್ನು ಆಪರೇಷನ್ ಮಾಡ್ತಾರೆಂದು ಅನಸ್ತೇಷಿಯಾ ತೆಗೆದುಕೊಂಡು ಮಲಗಿದ್ದ ಮಹಿಳೆಯರ ಸಂಬಂಧಿಗಳು ವೈದ್ಯನ ಅವತಾರ ನೋಡಿ ಫುಲ್ ಗರಂ ಆಗಿದ್ದಾರೆ. ಜನರನ್ನು ಸಮಾಧಾನ ಮಾಡೋ ಕಸರತ್ತು ಮಾಡಿದ ಆಸ್ಪತ್ರೆ ಸಿಬ್ಬಂದಿ ವೈದ್ಯರಿಗೆ ಏನೋ ಆಗಿಟ್ಟಿದೆ. ಶುಗರ್ ಕಮ್ಮಿ ಆಗಿದೆ, ಬಿಪಿ ಜಾಸ್ತಿ ಆಗಿದೆ ಎಂದು ಹೈ ಡ್ರಾಮ ಮಾಡಿದ್ದಾರೆ. ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ, ಬೇರೆ ವೈದ್ಯರನ್ನ ಕರೆಸಿ ಆಪರೇಷನ್ ಮಾಡಿಸಲು ಸಿದ್ಧತೆ ನಡೆಸಲಾಗಿದೆ.ಒಟ್ಟಿನಲ್ಲಿ ಈ ಕುಡುಕ ವೈದ್ಯನಿಂದಾಗಿ ಸಂತಾನಹರಣ ಮಾಡಿಸಿಕೊಳ್ಳಲು ಬಂದ ಮಹಿಳೆಯರು ಕೆಲ ಸಮಯ ಸಂಕಷ್ಟಕ್ಕೆ ಒಳಗಾಗಿರುವುದು ಮಾತ್ರ ಸತ್ಯ. ಇಂತಹ ಕುಡುಕ ವೈದ್ಯನ ವಿರುದ್ದ ಸಂಬಂಧಪಟ್ಟ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳತ್ತಾರೆ ಎಂಬುದನ್ನ ಕಾದು ನೋಡಬೇಕಿದೆ‌