ಸುದ್ದಿಬಿಂದು ಬ್ಯೂರೋ
ಕಾರವಾರ:ತಾಲೂಕಿನ ಸಿದ್ದರ ಗ್ರಾಮದ ಪ್ರಗತಿಪರ ರೈತ ಮನೋಹರ ಗಾಂವ್ಕರ್ ಅವರ ಮನೆಯ ಹಿಂಭಾಗದ ತೋಟದಲ್ಲಿ ಕಟ್ಟಿದ ಎಮ್ಮೆ ಕರುವನ್ನು ಹುಲಿ ಬಂದು ಕೊಂದು ತಿಂದು ಹೋಗಿರುವ ಘಟಣೆ ನಡೆದಿದೆ.
ಶುಕ್ರವಾರ ತಡ ರಾತ್ರಿ ಈ ಘಟಣೆ ನಡೆದಿದ್ದು,ಕಾರವಾರ ಕೈಗಾ ರಸ್ತೆಯ ಪಕ್ಕದಲ್ಲಿಯೇ ಇರುವ ಮನೋಹರ ಗಾಂವ್ಕರ್ ಅವರ ಮನೆಯ ಹಿಂಭಾಗದ ಹಿತಲಿನಲ್ಲಿ ಕಟ್ಟಿದ ಎಮ್ಮೆಕರುವಿಗೆ ಹುಲಿ ಭೀಕರವಾಗಿ ಬೇಟೆಯಾಡಿ ಹೊಟ್ಟೆಭಾಗ ಸಂಪೂರ್ಣ ತಿಂದು ಹೋಗಿದೆ. ಬೆಳ್ಳಿಗ್ಗೆ ಎದ್ದು ಕರುವಿನ ಈ ಭೀಕರ ಸ್ಥಿತಿ ಕಂಡು ಮನೆಯವರೆಲ್ಲಾ ಬಯದಿಂದ ಕಂಗಾಲಾಗಿದ್ದಾರೆ. ಘಟಣೆಯನ್ನು ಅರಣ್ಯ ಇಲಾಖೆಯ ಗಮನಕ್ಕೆ ತರಲಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಪರಿಶಿಲನೆ ನಡೆಸಿ, ತಡ ರಾತ್ರಿಯಲ್ಲಿ ಹುಲಿ ಬಂದು ಮನೆಯ ಹಿತಲಿನಲ್ಲಿ ಕಟ್ಟಿರುವ ಎಮ್ಮೆ ಕರುವಿನ ಮೇಲೆ ಹಲ್ಲೆ ನಡೆಸಿ ಬೇಟೆಯಾಡಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.
ಕಾರವಾರ ತಾಲೂಕು ಸೇರಿದಂತೆ ಸುತ್ತಮೂತ್ತಲಿನ ಭಾಗದಲ್ಲಿ ಇತ್ತೀಚ್ಚಿಗೆ ಕಾಡು ಪ್ರಾಣಿಗಳ ಹಾವಳಿ ಜಾಸ್ತಿಯಾಗುತ್ತಿದೆ.ಈ ಭಾಗದ ಬಹುತೇಕ ಹೊಲಗಳು ಪಾಳು ಬಿದ್ದಿವೆ.ರೈತರು ಕೃಷಿಯಿಂದ ವಿಮುಖರಾಗಿದ್ದು, ಹಸು ಎಮ್ಮೆ ರಾಸುಗಳನ್ನು ಹಟ್ಟಿಯಲ್ಲಿ ಕಟ್ಟಿ ಸಾಕುವ ಪದ್ದತಿಯೂ ಕಣ್ಮರೆಯಾಗಿದೆ.ಎಲ್ಲ ದನಕರುಗಳು ರಸ್ತೆ ಮದ್ಯದಲ್ಲಿಯೋ,ಶಾಲಾ ಮೈದಾನದಲ್ಲಿಯೋ, ದೇವಾಲಗಳ ಆವರಣದಲ್ಲಿಯೋ, ಅಥವಾ ಇತರ ಬಯಲು ಪ್ರದೇಶದಲ್ಲಿ ಬಿಡಾಡಿಯಾಗಿ ಗುಂಪು ಗುಂಪಾಗಿ ಇರುತ್ತವೆ.ಇನ್ನೂ ಅಲ್ಲೊಬ್ಬರು ಇಲ್ಲೊಬ್ಬರು ಹಾಲು ಹಿಂಡುವ ಹಸು- ಎಮ್ಮೆಗಳನ್ನು ಕಟ್ಟುವುದು ಕಂಡುಬರುತ್ತದೆ.
ಬಹುಪಾಲು ಕೃಷಿ ಜಮಿನು ಪಾಳು ಬಿದ್ದಿರುವುದರಿಂದ ಕಾಡು ಬೇಳೆದಿರುವ ಕಾರಣ ಕಾಡಿನ ಪ್ರಾಣಿಗಳು ಹಚ್ಚಾಗಿರುವುದು ಕಂಡು ಬರುತ್ತಿದೆ. ಹುಲಿ, ಚಿರತೆ, ಕಾಡು ಹಂದಿಗಳು, ಕಡವೆ, ಸೇರಿದಂತೆ ಇತರ ಪ್ರಾಣಿಗಳು, ಸರಿಸ್ರಪಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿರುವುದು ಕಂಡು ಬರುತ್ತಿದೆ. ಹಿಂದೆ ಕಾಡಂಚ್ಚಿನಲ್ಲಿ ಇರುವ ಮನೆಗಳ ನಾಯಿ, ಬೆಕ್ಕು, ಕೋಳಿಗಳನ್ನು ಹಿಡಿಯುವ ಈ ತೋಳ, ಹುಲಿಗಳು ಈಗ ಊರಿನಲ್ಲಿಯೂ ಬಂದು ತಮ್ಮ ಆಹಾರದ ಹುಡುಕಾಟ ಮಾಡುವುದು ಅಲ್ಲಲ್ಲಿ ಕಂಡು ಬರುತ್ತದೆ.