ಸುದ್ದಿಬಿಂದು ಬ್ಯೂರೋ
ರಾಯಚೂರು : ಪತ್ನಿ ಪರ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿರುವ ವಿಚಾರ ತಿಳಿದ ಪತಿರಾಯ,ಮರು ಮದುವೆಗೆ ಮಗು ಅಡ್ಡಿಯಾಗುತ್ತೆ ಎಂದು ಹೆತ್ತ ಮಗುವನ್ನೇ ಕೊಂದ ತಂದೆ 3ದಿನ ಮಗುವನ್ನ ಕಲ್ಲಿನ ಪೊಟರೆಯಲ್ಲಿ ಮುಚ್ಚಿಟ್ಟ ಘಟನೆ ರಾಯಚೂರು ಜಿಲ್ಲೆಯ ಮುದಗಲ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಮನಕುಲಕುವ ನಡೆದಿದೆ.

ಅಭಿನವ 14 ತಿಂಗಳ ಕೂಸು ಮೃತ ಮಗುವಾಗಿದೆ. ಮಹಾಂತೇಶ್ (32)ಎಂಬಾತನೆ ಮಗುವನ್ನ ಕೊಂದ ಪಾಪಿ ತಂದೆಯಾಗಿದ್ದಾನೆ‌.ಆತನ ಪತ್ನಿ ಪರ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನವ ವಿಷಯ ತಿಳಿದು ಮತ್ತೊಂದು ಮದುವೆಗೆ ಪತಿ‌‌ ಮಹಾಂತೇಶ ತಯಾರಿ ನಡೆಸಿದ್ದ, ಹೀಗಾಗಿ ಮರು ಮದುವೆಗೆ ಮಗು ಅಡ್ಡಿಯಾಗಬಹುದು ಎಂದು ತಂದೆಯೇ ತನ್ನ ಮಗುವನ್ನ ಕೊಂದು ಜೈಲು ಸೇರುವಂತಾಗಿದೆ.

ಹತ್ಯೆ ನಡೆದ ಮೂರು ದಿನಗಳ ಬಳಿಕ ತನಿಖೆ ನಡೆಸಿದ ಪೊಲೀಸರು ಹಂತಕ ತಂದೆಯನ್ನ ಬಂಧಿಸಿದ್ದು, ಪೊಲೀಸರಿಗೆ ಮೊದಲು ಮಗುವನ್ನು ಸುಟ್ಟು ಹಾಕಿರುವುದಾಗಿ ಮಾಹಿತಿ ಹೇಳಿದ ಆರೋಪಿ ಮಹಾಂತೇಶ.ಲಾಠಿ ರುಚಿ ತೋರಿಸಿದ ಬಳಿಕ ಮುಚ್ಚಿಟ್ಟ ಮಗುವಿನ ಬಗ್ಗೆ ಮಾಹಿತಿ ನೀಡಿದ್ದಾನೆ. ಈ ಕುರಿತು ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.