ಸುದ್ದಿಬಿಂದು ಬ್ಯೂರೋ
ಕಾರವಾರ : ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧ ಪಕ್ಷವಿರೋಧಿ ಚಟುವಟಿಕೆ ಮಾಡಿದ ಉತ್ತರಕನ್ನಡ ಜಿಲ್ಲೆಯ ಬಿಜೆಪಿಯ ಹಲವು ಪ್ರಮುಖ ಮುಖಂಡರ ವಿರುದ್ಧ ಬಿಜೆಪಿ ಅಭ್ಯರ್ಥಿಗಳು ನೀಡಿದ ದೂರಿ ಅನ್ವಯ ರಾಜ್ಯ ಬಿಜೆಪಿ ಶಿಸ್ತು ಸಮಿತಿಯ ಸೂಚನೆ ಮೇರೆಗೆ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಸೇರಿ ಹಲವರನ್ನ ಈಗ ಇರುವ ಪದಾಧಿಕಾರಿಗಳ ಜವಬ್ದಾರಿಯಿಂದ ವಿಮುಕ್ತಗೊಳಿಸಲಾಗಿದೆ.

ಶಿರಸಿ ವಿಧಾನಸಭಾ ಕ್ಷೇತ್ರ
1) ಕೆ ಜಿ ನಾಯ್ಕ (ನಿಕಟಪೂರ್ವ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಕಾರ್ಯಕಾರಿಣಿ ಸಧಸ್ಯರು) (ಇವರಿಗೆ ಈಗಾಗಲೇ ರಾಜ್ಯ ಶಿಸ್ತು ಸಮಿತಿಯಿಂದ ಪತ್ರ ಮುಖೇನ ಸೂಚಿಸಲಾಗಿದೆ.)
2)ನಾಗರಾಜ ನಾಯ್ಕ ಬೇಡ್ಕಣಿ (ಜಿಲ್ಲಾಕಾರ್ಯದರ್ಶಿಗಳು)
3) ಕೃಷ್ಣಮೂರ್ತಿ ಮಡಿವಾಳ, ಕಡಕೇರಿ (ಜಿಲ್ಲಾ ಕಾರ್ಯದರ್ಶಿಗಳು)
4) ವಿನಯ್ ಎಸ್ ಹೊನ್ನೆಗುಂಡಿ (ಉಪಾಧ್ಯಕ್ಷರು ಸಿದ್ದಾಪುರ ಮಂಡಲ)
5)ಎಸ್ ಕೆ ಮೇಸ್ತಾ (ಪ್ರ. ಕಾರ್ಯದರ್ಶಿಗಳು ಸಿದ್ದಾಪುರ ಮಂಡಲ)
6) ಶ್ರೀಧರ ನಾಯ್ಕ ಬಸವನಬೈಲ್ (ಕಾರ್ಯದರ್ಶಿಗಳು
ಸಿದ್ದಾಪುರ ಮಂಡಲ)

ಯಲ್ಲಾಪುರ ವಿಧಾನಸಭಾ ಕ್ಷೇತ್ರ
1) ಕಲ್ಪನಾ ಗಜಾನನ ನಾಯ್ಕ (ಜಿಲ್ಲಾ ಉಪಾಧ್ಯಕ್ಷರು)
2) ಬಾಬು ಬಾಂದೇಕರ (ಶಕ್ತಿಕೇಂದ್ರ ಪ್ರಮುಖರು ಸಬಗೇರಿ)
3) ಕೆ ಟಿ ಹೆಗಡೆ (ತಾಲೂಕಾ ಮಾಧ್ಯಮ ಪ್ರಕೋಷ್ಠದ ಸಂಚಾಲಕರು)
4) ವಿಠ್ಠಲ ಜಾನು ಪಾಂಡ್ರಮಿಶೆ (ತಾಲೂಕಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ,
5) ಗಣಪತಿ ಆರ್ ಗಾಂವರ್, ಮಾನಿಗದ್ದೆ(ಜಿಲ್ಲಾವಿಶೇಷ ಆಮಂತ್ರಿತರು)
ಭಟ್ಕಳ್ ವಿಧಾನಸಭಾ ಕ್ಷೇತ್ರ
1) ರವಿ ನಾಯ್ಕ (ಅಧ್ಯಕ್ಷರು ಜಿಲ್ಲಾ ಹಿಂದುಳಿದ ವರ್ಗ ಮೋರ್ಚಾ)
2) ಸುರೇಶ ತಿಮ್ಮಪ್ಪ ನಾಯ್ಕ (ಸಂಚಾಲಕರು ಜಿಲ್ಲಾ ಕಾನೂನು ಪ್ರಕೋಷ್ಠ)
3) ವಿಷ್ಣುಮುರ್ತಿ ಹೆಗಡೆ (ಪ್ರ. ಕಾರ್ಯದರ್ಶಿ ಜಿಲ್ಲಾ ರೈತ ಮೋರ್ಚಾ)
4) ಮುಕುಂದ ಮಂಜುನಾಥ ನಾಯ್ಕ (ಸಂಚಾಲಕರು ಜಿಲ್ಲಾ ಕಾರ್ಮಿಕ ಪ್ರಕೋಷ್ಠ)
5) ಈಶ್ವರ ನಾರಾಯಣ ನಾಯ್ಕ,ಮಂಕಿ (ಹಿಂದುಳಿದ ವ ಮೋರ್ಚಾ ಜಿಲ್ಲಾ ಪ್ರಭಾರಿ)

ಮುಂಡಗೋಡ, ಹೊನ್ನಾವರ,
1) ಸುರೇಶ ಖಾರ್ವಿ ಮಂಕಿ (ಜಿಲ್ಲಾ ಪ್ರಕೋಷ್ಠ ಸಂಚಾಲಕರು)
2) ಫಣಿರಾಜ ಎಮ್ ಹದಳಗಿ (ಪಟ್ಟಣ ಪಂಚಾಯತ್ ಸಧಸ್ಯರು ಮುಂಡಗೋಡ) (ಪಕ್ಷದಿಂದ ಉದ್ಘಾಟನೆ ಗೊಳಿಸಲಾಗಿದೆ)
3) ಸಾಧನಾ ನಾಯ್ಕ ಕರ್ಕಿ‌ (ಜಿಲ್ಲಾ ಸಮಿತಿ ಸಧಸ್ಯರು) (ಪಕ್ಷದಿಂದ ಉದ್ಘಾಟನೆ ಗೊಳಿಸಲಾಗಿದೆ) ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ