ಸುದ್ದಿಬಿಂದು ಬ್ಯೂರೋ
ಕುಮಟಾ : ಸಾಕಷ್ಟು ಕುತೂಹಲಕ್ಕೆ ಕಾರಣವಾಗಿರುವ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಕ್ಷಣಕ್ಕೊಂದು ಬದಲಾವಣೆ ಉಂಟಾಗುತ್ತಿದ್ದು,ಕಾಂಗ್ರೆಸ್ ನಲ್ಲಿ ಟಿಕೆಟ್ ಸಿಗದೆ ಬಂಡಾಯ ಬಾವುಟ ಹಾರಿಸಿದ್ದ ಶಿವಾನಂದ ಹೆಗಡೆ ಕಡತೋಕ ಈಗ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ..

ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನ ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿದ್ದ ಶಿವಾನಂದ ಹೆಗಡೆ ಕುಮಟಾ ಕ್ಷೇತ್ರದಲ್ಲಿ‌ನ ಟಿಕೆಟ್ ನಿವೇದಿತ್ ಆಳ್ವಾ ಅವರಿಗೆ ಘೋಷಣೆ ಆದ ಬಳಿಕ ಕಾಂಗ್ರೆಸ್ ನಿಂದ ಬಂಡಾಯ ಎದಿದ್ದರು. ಬಳಿಕ ಅವರು ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರಿಂದ ನಾಮಪತ್ರ ಸಲ್ಲಿಕೆ ಮಾಡಿಸಿ ತಾನು ಬೆಂಬಲ ನೀಡುವುದಾಗಿ ಹೇಳಿದ್ದರು.

ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಶಾರದಾ ಶೆಟ್ಟಿ ಅವರು ಸಹ ನಿನ್ನೆ ತಮ್ಮ ನಾಮಪತ್ರ ವಾಪಸ್ ಪಡೆದು ರಾಜಕೀಯದಿಂದ ದೂರ ಇರುವುದಾಗಿ ಹೇಳಿಕೊಂಡಿದ್ದಾರೆ. ಇದಾದ ಬಳಿಕ ಅಂತ್ರವಾದ ಶಿವಾನಂದ ಹೆಗಡೆ ಅತ್ತ ವಾಪಸ್ ಕಾಂಗ್ರೆಸ್ ಗೆ ಹೋಗಲಾಗದೆ. ಬಿಜೆಪಿ ಸೇರ್ಪಡೆಗೆ ಮುಂದಾಗಿರುವುದಾಗಿ ತಿಳಿದು ಬಂದಿದೆ. ಇನ್ನೂ ಒಂದೇರಡು ದಿನದಲ್ಲಿ ಅವರು ಬಿಜೆಪಿ ಸೇರ್ಪಡೆ ಆಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಈ ಎಲ್ಲಾ ರಾಜಕೀಯ ಚೆನ್ನಾಗಿ ಅರಿತ ಶಾರದಾ ಶೆಟ್ಟಿ ಅವರು ಈಎಲ್ಲಾ ಒಳ ಹೊಡೆತ ತಪ್ಪಿಸಿಕೊಳ್ಳಲು ರಾಜಕೀಯ ಪಟ್ಟನ್ನ ಕರಗತ ಮಾಡಿಕೊಂಡಿರುವ ಶಾರದಾ ಶೆಟ್ಟಿ ಅವರು ತಮ್ಮ ನಾಮಪತ್ರವನ್ನ ಹಿಂಪಡೆಯುವ ಮೂಲಕ ಅತ್ಯಂತ ಜಾಣ ನಡೆ ಅನುಸರಿಸಿದ್ದಾರೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ