ಸುದ್ದಿಬಿಂದು ಬ್ಯೂರೋ
ಕಾರವಾರ
: ಕಾಂಗ್ರೆಸ್ ‌ಟಿಕೆಟ್ ಕೈ ತಪ್ಪಿದ್ದ ಹಿನ್ನಲೆಯಲ್ಲಿ ಟಿಕೆಟ್ ನ ಪ್ರಬಲ‌ ಆಕಾಂಕ್ಷಿಯಾಗಿದ್ದ‌ ಚೈತ್ರಾ ಕೋಠಾರಕರ್ ‌ಕಾಂಗ್ರೇಸ್ ತೊರೆದು ಜೆಡಿಎಸ್ ಸೇರ್ಪಡೆ ‌ಗೊಂಡಿದ್ದು, ಇದರಲ್ಲ‌ ಬೆನ್ನಲ್ಲೆ ಅವರನ್ನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದ್ದು, ಭಿ ಪಾರ್ಮ ಕೂಡ ಅವರ ಕೈ ಸೇರಿದೆ.

ಕಾಂಗ್ರೇಸ್ ನಿಂದ ಸ್ಪರ್ಧಿಸಿ ಜಿಲ್ಲಾ ಪಂಚಾಯತ ಸದಸ್ಯೆಯಾಗಿ ದ್ದ ಚೈತ್ರಾ ಕೋಠಾರಕರ್ ‌ಅವರು ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುವ ಮೂಲಕ ಜನರ ಸಮಸ್ಯೆಗೆಗಳಿಗೆ ಸ್ಪಂಧಿಸುತ್ತಾ ಬರುವ ಮೂಲಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು. ಈ ಬಾರಿ ಕಾರವಾರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿ ಅರ್ಜಿಯನ್ನ ಕೂಡ ಸಲ್ಲಿಸಿದ್ದರು. ಆದ್ರೆ ಕಾಂಗ್ರೆಸ್ ಮಾಜಿ ಶಾಸಕ ಸತೀಶ ಸೈಲ್ ಅವರಿಗೆ ಟಿಕೆಟ್ ಘೋಷಣೆ ಮಾಡಿದ ಬಳಿಕ ಚೈತ್ರಾ ಅಸಮಾಧಾನಗೊಂಡಿದ್ದರು.ಕಾಂಗ್ರೆಸ್ ‌ಬಂಡಾಯ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಬಗ್ಗೆ ಕೂಡ ಅವರ ಆಪ್ತ ವಲಯದಲ್ಲಿ ಸಾಕಷ್ಟು ಚರ್ಚೆ ಆಗಿತ್ತು.

ಬಳಿಕ ಅವರು ಕಾಂಗ್ರೆಸ್ ನ ನಾಯಕರು ಅಥವಾ ಸ್ಣಳೀಯ ಮುಖಂಡರು ಅಸಮಧಾನವನ್ನ ಶಮನಕ್ಕೆ ಮುಂದಾಗಬೇಕು ಎಂಬ ನಿರೀಕ್ಷೆಯಲ್ಲಿ ಚೈತ್ರಾ ಕೋಠಾರಕರ್ ‌ಇದ್ದರು ಎನ್ನಲಾಗಿದೆ. ಆದರೆ ಯಾವೊಬ್ಬ ಕಾಂಗ್ರೆಸ್ ಮುಖಂಡರು ಇವರ ಭೇಟಿ ಮಾಡಿ ಮಾತುಕತೆ ನಡೆಸದೆ ಇರುವುದರಿಂದಾಗಿ ಇದೀಗ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಗೆ ಸೇರ್ಪಡೆಗೊಂಡಿದ್ದಾರೆ ಎನ್ನಲಾಗಿದೆ.

ಇನ್ನೂ ಜೆಡಿಎಸ್ ಸೇರ್ಪಡೆ ಗೊಂಡ ಚೈತ್ರಾ ಕೋಠಾರಕರ್ ಅವವರನ್ಬ ಕಾರವಾರ ಅಂಕೋಲಾ ಕ್ಷೇತ್ರದ ಜೆಡಿಎಸ್ ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡಿರುವ ಎಚ್ ಡಿ ಕುಮಾರಸ್ವಾಮಿ ಚೈತ್ರಾ ಅವರಿಗೆ ಪಕ್ಷದ ಭಿ ಫಾರ್ಮೆಟ್ ಸಹ ನೀಡಿದ್ದಾರೆ.