ಸುದ್ದಿಬಿಂದು ಬ್ಯೂರೋ
ಅಂಕೋಲಾ: ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕಾಡಿನ ಹಣ್ಣುಗಳನ್ನ ತಿಂದು ಏಲೆಯನ್ನ ಅಲ್ಲೆ ಎಸೆದು ಹೋಗುತ್ತಾರೆ. ಆದರೆ ಇದನ್ನ ನೋಡಿದ ಕಾಡು ಹಣ್ಣುಗಳನ್ನ ಮಾರಾಟ ಮಾಡುವ ಆ ಮಹಿಳೆ ಪ್ರಯಾಣಿಕರು ಎಸೆದು ಹೋಗುವ ಏಲೆಗಳನ್ನ ತಾನೆ ಕೈಯಿಂದ ಹೆಕ್ಕಿ ಹಾಕುವ ಮೂಲಕ ಸ್ವಲ್ಪ ಗೊಳಿಸಿಸುತ್ತಿರುವ ಬಗ್ಗೆ ಖ್ಯಾತ ಉದ್ಯಮಿ ಆನಂದ ಮಹೀಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರು ಸದಾ ಎಲೆಮರೆ ಕಾಯಿಯಂತಿರುವ ಸಾಧಕರನ್ನು ಗುರಿತಿಸುವ ಮನೋಭಾವ ಹೊಂದಿದ್ದು. ಸಾಮಾಜಿಕ ಜಾಲತಾಣಗಳಲ್ಲಿ ತಾನು ಕಂಡ ವಿಶಿಷ್ಟ ಜನರನ್ನು ಗುರುತಿಸುವ ಆನಂದ್ ಮಹೀಂದ್ರಾ ಅವರು ಆ ಜನರನ್ನು ಲೋಕಕ್ಕೆ ಪರಿಚಯ ಮಾಡಿಕೊಡುತ್ತಾರೆ..
ಅದೇ ರೀತಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಮಹಿಳೆಯ ಬಗ್ಗೆ ಮಹೀಂದ್ರಾ ಸಂಸ್ಥೆಯ ಅಧ್ಯಕ್ಷ ಆನಂದ್ ಮಹೀಂದ್ರಾ ಗಮನ ಸೆಳೆದಿದ್ದಾರೆ.ಆದರ್ಶ್ ಹೆಗ್ಡೆ ಎಂಬ ಟ್ವಿಟರ್ ಬಳಕೆದಾರರೊಬ್ಬರು ಅಂಕೋಲಾ ಬಸ್ ನಿಲ್ದಾಣದಲ್ಲಿನ ಓರ್ವ ಮಹಿಳೆಯ ಸ್ವಚ್ಛ ಭಾರತ ಕಾಯಕದ ವಿಡಿಯೊವೊಂದನ್ನು ಹಂಚಿಕೊಂಡಿದ್ದರು. ಜೊತಗೆ, “ಈ ಮಹಿಳೆ ಹಣ್ಣು ಮಾರಾಟಗಾರ್ತಿ ಮತ್ತು ಅವರು ಅಂಕೋಲಾ ಬಸ್ ನಿಲ್ದಾಣದಲ್ಲಿ ಎಲೆಗಳಲ್ಲಿ ಸುತ್ತಿ ಹಣ್ಣುಗಳನ್ನು ಮಾರಾಟ ಮಾಡುತ್ತಾರೆ. ಕೆಲವರು ಹಣ್ಣು ತಿಂದು ಬಳಿಕ ಎಲೆಗಳನ್ನು ಎಸೆಯುತ್ತಾರೆ. ಆದರೆ ಈ ಮಹಿಳೆ ಅಲ್ಲಿಗೆ ಹೋಗಿ ಎಲೆಗಳನ್ನು ತೆಗೆದುಕೊಂಡು ಕಸದ ಬುಟ್ಟಿಗೆ ಹಾಕುತ್ತಾರೆ. ಇದು ಅವರ ಕೆಲಸವಲ್ಲ ಆದರೂ ಅವರು ಅದನ್ನು ಮಾಡುತ್ತಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ಟ್ವೀಟ್ ಗಮನಿಸಿದ ಆನಂದ್ ಮಹೀಂದ್ರಾ ಅವರು ಈ ವಿಡಿಯೋ ಶೇರ್ ಮಾಡಿ, “ಇವರು ಭಾರತ ಸ್ವಚ್ಛ ಮಾಡುವ ನಿಜವಾದ, ಶಾಂತ ಹೀರೋಗಳು. ಆಕೆಯ ಪ್ರಯತ್ನಗಳು ಜನರ ಗಮನಕ್ಕೆ ಬಂದಿದೆ ಮತ್ತು ಮೆಚ್ಚುಗೆ ಪಡೆದಿವೆ ಎಂದು ಅವರು ತಿಳಿದು ಕೊಳ್ಳಬೇಕೆಂದು ನಾನು ನಿಜವಾಗಿಯೂ ಬಯಸುತ್ತೇನೆ. ನೀವು ಆ ಪ್ರದೇಶದಲ್ಲಿ ವಾಸಿಸುವ ಯಾರನ್ನಾದರೂ ಕಂಡುಕೊಂಡರೆ ಮತ್ತು ಅವಳನ್ನು ಸಂಪರ್ಕಿಸಬಹುದೇ?” ಎಂದು ಕೇಳಿಕೊಂಡಿ ಎಂದು ಟ್ವಿಟ್ ಮಾಡಿದ್ದಾರೆ.