ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ:ಗೋ ಕಳ್ಳತನದ ಆರೋಪಿಗಳಿಗೆ ಶಿಕ್ಷೆಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯರು ನೀಡಿದ ಹೇಳಿಕೆ ಸರಿಯಾಗಿಯೇ ಇದ್ದು , ಅವರ ಹೇಳಿಕೆಯನ್ನು ಸ್ವಾಗತಿಸುವುದಾಗಿ ಕುದ್ರಗಿ ಗ್ರಾ.ಪಂ. ಅಧ್ಯಕ್ಷ ಫೈಸಲ್ ಬಾಬಾಪಕ್ಕಿ ಮಸ್ತಾನ್ ಬೆಂಬಲಿಸಿದ್ದಾರೆ.

ಇತ್ತೀಚಿಗೆ ತಾಲೂಕಿನ ಸಾಲ್ಕೋಡ್ ಗ್ರಾಮದ ಕೊಂಡಾಕುಳಿಯ ಬಳಿ ಗೋವಿನ ಹೀನ ಕೃತ್ಯದ ಬಗ್ಗೆ ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಮಂಕಾಳ ವೈದ್ಯ ಈ ಕೃತ್ಯ ಖಂಡಿಸಿ ಪೊಲೀಸರು ತನಿಖೆ ನಡೆಸಿ ಅಪರಾಧಿಗಳನ್ನು ಬಂಧಿಸಿದ್ದಾರೆ. ಈ ವೇಳೆ ಆರೋಪಿ ಕಾಲಿಗೆ ಗುಂಡು ಹೊಡೆದಿರುವ ವಿಚಾರ ಹಾಗೂ ಗೋ ಕಳ್ಳತನ ಮಾಡುವರಿಗೆ ಶಿಕ್ಷೆ ನೀಡುವ ವಿಚಾರದಲ್ಲಿ ಸಚಿವರ ಹೇಳಿಕೆ ಸರಿಯಾಗಿದೆ. ಅಪರಾಧ ಚಟುವಟಿಕೆ ಮಾಡುವಂತೆ ಯಾರಿಗೂ ಯಾವ ಧರ್ಮವೂ ಹೇಳಿಕೊಡುವುದಿಲ್ಲ. ತಪ್ಪನ್ನು ಯಾರೇ ಮಾಡಿದರೂ ತಪ್ಪು. ಈ ಬಗ್ಗೆ ಈಗಾಗಲೇ ತಂಜೀಂ ಸಹಿತ ಹಲವು ಸಂಘಟನೆಗಳು ಸ್ಪಷ್ಟನೆ ಕೊಟ್ಟಿದ್ದಾರೆ.

ಈ ಹಿಂದಿನ ಹಲವು ಗೋ ಕಳ್ಳತನ ಪ್ರಕರಣದಲ್ಲಿ ಮುಸ್ಲಿಂ, ಹಿಂದು, ಕ್ರಿಶ್ಚಿಯನ್ ಸೇರಿದಂತೆ ಹಲವು ಧರ್ಮದ ವ್ಯಕ್ತಿಗಳ ಹೆಸರು‌ ಕೇಳಿ ಬಂದಿದ್ದು, ಹಲವರ ವಿರುದ್ದ ಪ್ರಕರಣ ಕೂಡಾ ದಾಖಲಾಗಿದೆ. ಈ ಬಾರಿ ಗೋ ಕಳ್ಳತನ ಮತ್ತು ಕೊಲೆ ಮಾಡಿದ ಪ್ರಕರಣದಲ್ಲಿ ಯಾರೇ ಶಾಮೀಲಾಗಿದ್ದರೂ ಶಿಕ್ಷೆ ಆಗಲೇಬೇಕು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಗೋ ಕಳ್ಳತನದಲ್ಲಿ ಸ್ಥಳೀಯರು ಶಾಮೀಲಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಅವರು ಯಾರು ಎಂದು ಹೆಸರನ್ನು ಸ್ಪಷ್ಟಪಡಿಸಬೇಕು.

ಈ ಪ್ರಕರಣದಲ್ಲಿ ಯಾವುದೇ ಧರ್ಮ ಜಾತಿಯವರಿದ್ದರೂ ಶಿಕ್ಷೆ ಆಗಲೆಬೇಕು. ಈ ಬಗ್ಗೆ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚೀವರ ಕ್ರಮಕ್ಕೆ ಬೆಂಬಲಿಸುವ ಜೊತೆ ಪೊಲೀಸ್ ಇಲಾಖೆಯು ಎಲ್ಲಾ ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯಾಲಯದ ಮುಂದೆ ನಿಲ್ಲಿಸಿ ಪ್ರಕರಣಕ್ಕೆ ನ್ಯಾಯ ಒದಗಲಿಸಿಲಿ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ