ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಇಂದು ಜಿಲ್ಲಾಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ವೈದ್ಯ ಅವರು ಕುಮಟಾ ಶಾಸಕರನ್ನ ಮರು ನಾಮಕರಣಗೊಳಿಸಿ ದಿನಕರ ಖಾನ್ ಎಂದು ಘೋಷಿಸಿದ್ದಾರೆ.
ಗೋ ಕಳ್ಳತನ ಎಲ್ಲಾ ಸರಕಾರದಲ್ಲೂ ನಡೆದಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗಲು ನಡಿದೆ,ಬಿಜೆಪಿ ಶಾಸಕರಿರುವ ಕುಮಟಾದಲ್ಲೂ ನಡೆದಿದೆ. ಹಾಗಂತ ದಿನಕರ ಶೆಟ್ಟರು ದಿನಕರ ಖಾನ ಆಗಬಿಟ್ಟರಾ, ಗೋ ಕಳ್ಳತನ ವಿಚಾರದಲ್ಲಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ವಿರುದ್ಧ ದಿನಕರ ಶೆಟ್ಟಿ ಅವರು ತಮ್ಮ ನಾಲಿಗೆ ಹರಿಬಿಟ್ಟಿದ್ದು ಸರಿಯಲ್ಲ. ಮುಖ್ಯಮಂತ್ರಿಗಳು ಇಲ್ಲಿಗೆ ಬಂದು ಏನು ಗೋ ಕಳ್ಳತನಕ್ಕೆ ಸಪೋರ್ಟ್ ಮಾಡಿದ್ದರಾ..?
ಹಾಗೇನಾದ್ರೂ ಇದ್ದರೆ ಗೋ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಹೇಗೆ ಆರೆಸ್ಟ್ ಮಾಡಿದ್ದರು, ದಿನಕರ ಶೆಟ್ಟಿ ಆಗಲಿ ಬೇರೆ ಯಾರೆ ಆಗಲಿ ಮಾತ್ನಾಡುವಾಗ ಸರಿಯಾಗಿ ಮಾತ್ನಾಡಬೇಕು.ನಾವು ಏನ ಮಾಡಿದ್ದೇವೆ ಎಂದು ನೋಡಿ ಮಾತ್ನಾಡಬೇಕು.ಈ ವಿಚಾರದಲ್ಲಿ ನಾವು ಇಂತಹ ಕೃತ್ಯಕ್ಕೆ ಯಾವತ್ತು ಬೆಂಬಲಿಸುವುದಿಲ್ಲ. ಅದು ಯಾರೆ ಇರಲಿ ಮುಲಾಜ್ ಇಲ್ಲದೆ ಕ್ರಮ ತೆಗೆದುಕೊಳ್ಳತೇವೆ ಎಂದಿದ್ದಾರೆ.
ಇದನ್ನೂ ಓದಿ
- “ರೈತರನ್ನು ಮದುವೆಯಾಗುವ ಮಹಿಳೆಯರಿಗೆ ಪ್ರೋತ್ಸಾಹ ಧನ ನೀಡುವಂತೆ ಸಿಎಂಗೆ ಪತ್ರ ಬರೆದ ಶಾಸಕ
- Bjp/ಬಿಜೆಪಿ ಉತ್ತರಕನ್ನಡ ಜಿಲ್ಲಾ ರೈತಮೋರ್ಚಾ ಅಧ್ಯಕ್ಷರಾಗಿ ಅನಂತಮೂರ್ತಿ ಹೆಗಡೆ ನೇಮಕ
- Accident News/ಭೀಕರ ರಸ್ತೆ ಅಪಘಾತ, ಸ್ಥಳದಲ್ಲೆ ಓರ್ವ ಸಾವು
- Bhatkal Crime News/ ಭಟ್ಕಳದಲ್ಲಿ ಕಾಡುಪ್ರಾಣಿ ಹತ್ಯೆ ಶಂಕೆ: 21 ಕೆಜಿ ಮಾಂಸ, ಜಿಂಕೆ ಕೊಬ್ಬು, ಎರಡು ಏರ್ಗನ್ ವಶಕ್ಕೆ


