ಸುದ್ದಿಬಿಂದು ಬ್ಯೂರೋ ವರದಿ

ಕಾರವಾರ : ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾದ ಜೆ ಇ ಇ ಪರೀಕ್ಷೆಯಲ್ಲಿ ಮತ್ತು ಕರ್ನಾಟಕ ಸಿಇಟಿಯಲ್ಲಿ ಅತ್ಯುತ್ತಮ ರಾಂಕಿಂಗ್ ನೊಂದಿಗೆ ಸಾಧನೆ ಮಾಡಿದ್ದಕ್ಕಾಗಿ ಅರ್ಜುನ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ಧಾರವಾಡ ಹಾಗೂ ಬಾಲ ಮಂದಿರ ಪ್ರೌಢಶಾಲೆ ಕಾರವಾರ ಸಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.  

ತನ್ನ ಸತತ ಪರಿಶ್ರಮ ಪ್ರಯತ್ನ ಶಿಕ್ಷಕರ ಮಾರ್ಗದರ್ಶನದೊಂದಿಗೆ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಯಾದ ವರದಿಗಾರರಾಗಿರುವ ಕಡತೋಕ ಮಂಜು ಅವರ ಪುತ್ರ ಅನಿಶ್ ನಾಯ್ಕ, ಈತನು ಪಿ ಯು ಸಿ ಯಲ್ಲಿ 96%,ಜೆ ಇ ಇ ಮೇನ್ಸ್ ನಲ್ಲಿ 99.56%, ಜೆ ಇ ಇ ಆಡವಾನ್ಸ ನಲ್ಲಿ 5809 ರಾಂಕಿಂಗ್ , ಕೆ ಸಿ ಇ ಟಿ ಪರೀಕ್ಷೆಯಲ್ಲಿ 892 ರಾಂಕಿಂಗ್ ಹಾಗೂ ಎಸ್ ಓ ಎಫ್ ಇಂಟರ್ ನ್ಯಾಷನಲ್ ಒಲಂಪಿಯಾಡ್ ಎಕ್ಸಾಮಿನೇಷನ್ ನಲ್ಲಿ 189 ರಾಂಕಿಂಗ್, ಝೋನಲ್ ನಲ್ಲಿ 10 ರಾಂಕಿಂಗ್ ಮತ್ತು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ನಡೆಸುವ ಎನ್.ಡಿ.ಎ ಪರೀಕ್ಷೆಯಲ್ಲಿ ಸ್ಟೇಜ್ 1 ಪರೀಕ್ಷೆಯನ್ನು ತೇರ್ಗಡೆ ಹೊಂದಿ ಉತ್ತಮ ಸಾಧನೆ ಮಾಡಿದ್ದನೆಂದು ಹೇಳಲು ಹೆಮ್ಮೆ ಅನಿಸುತ್ತದೆ.

ಈತನ ಸಾಧನೆಯನ್ನು ಕಂಡು ಶಾಲೆಯ ಮುಖ್ಯೋಪಾಧ್ಯಾಯರಾದ ಅಂಜಲಿ ಮಾನೆ ಅವರು ಮಾತನಾಡಿ ವಿದ್ಯಾರ್ಥಿಯ ಶಾಲಾ ಆವೃತ್ತಿಯಿಂದಲೂ ಆತನ ಪರಿಶ್ರಮ ಪ್ರಯತ್ನ ಹಾಗೂ ಉತ್ತಮ ನಡವಳಿಕೆ ಜೊತೆಗೆ ಎಲ್ಲರೊಂದಿಗೂ ಉತ್ತಮ ಬಾಂಧವ್ಯವನ್ನು ಹೊಂದಿದ ವಿದ್ಯಾರ್ಥಿಯ ಈ ಸಾಧನೆಯನ್ನು ಕಂಡು ಹೆಮ್ಮೆ ವ್ಯಕ್ತಪಡಿಸುವುದರೊಂದಿಗೆ ವಿದ್ಯಾರ್ಥಿಯ ಮುಂದಿನ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.

ಸನ್ಮಾನವನ್ನು ಸ್ವೀಕರಿಸಿದ ಅನೀಶ್ ನಾಯ್ಕ ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡಬೇಕಾದರೆ ಕೇವಲ ಒಂದು ದಿನಕ್ಕೆ ಮಾತ್ರ ಸಾಧ್ಯವಿಲ್ಲ ಅದು ನಿರಂತರವಾಗಿ ನಡೆಯುವ ಒಂದು ಪ್ರಕ್ರಿಯೆ ಆ ಪ್ರಕ್ರಿಯೆಯಲ್ಲಿ ಸತತ ಪರಿಶ್ರಮ ಪ್ರಯತ್ನ ಜೊತೆಗೆ ವಿಷಯ ಜ್ಞಾನವನ್ನು ಹೊಂದಿದಾಗ ಮಾತ್ರ ಇಂತಹ ಸಾಧನೆಗಳನ್ನು ಮಾಡಲು ಸಾಧ್ಯ ಎಂದು ತನ್ನ ಕಿರಿಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರೊಂದಿಗೆ ಅನುಭವವನ್ನು ಹಂಚಿಕೊಂಡು ಪ್ರೇರಣದಾಯಕ ನುಡಿಗಳ ನಾಡಿದನು. ಜೊತೆಗೆ ತನ್ನ ತಂದೆ-ತಾಯಿಗಳ ಪ್ರೋತ್ಸಾಹ ಬೆಂಬಲ ಹಾಗೂ ಅರ್ಜುನ ಸಂಸ್ಥೆಯ ಸಹಕಾರ ಶಿಕ್ಷಕರ ಪ್ರೋತ್ಸಾಹ ಹಾಗೂ ಕಾಲೇಜಿನ ವ್ಯವಸ್ಥೆಯ ಬಗ್ಗೆ ಆನಂದದಾಯಕ ನುಡಿಗಳ ನಾಡಿದನು.

ಅನೀಶ್ ನಾಯ್ಕ ಇವನು ಜೀ ಕನ್ನಡ ನ್ಯೂಸ್ ನ ಉತ್ತರಕನ್ನಡ ಜಿಲ್ಲಾ ವರದಿಗಾರ ಕಡತೋಕ ಮಂಜು, ಶಿಕ್ಷಕಿ ಶ್ವೇತಾ ನಾಯ್ಕ ಇವರ ಪುತ್ರನಾಗಿದ್ದಾನೆ. ಈ ಸಂದರ್ಭದಲ್ಲಿ ಅರ್ಜುನ ಸಂಸ್ಥೆಯ ನಿರ್ದೇಶಕರು ಬಾಲ ಮಂದಿರ ಶಾಲೆಯ ಪ್ರಾಚಾರ್ಯರು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಯ ಪಾಲಕರು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.