ಸುದ್ದಿಬಿಂದು ಬ್ಯೂರೋ
ಭಟ್ಕಳ:-ವಿಧಾನಸಭಾ ಚುನಾವಣೆ ವೇಳೆ ಅಶಾಂತಿ ಹಾಗೂ ಕಿಡಿಗೇಡಿತನ ಮಾಡುವುದರಲ್ಲಿ ಕುಖ್ಯಾತಿ ಪಡೆದಿರುವ ತಾಲೂಕಿನ ಮೂವರನ್ನ ಬಳ್ಳಾರಿ ಜಿಲ್ಲೆಯ ಗ್ರಾಮವೊಂದಕ್ಕೆ ಗಡಿಪಾರು ಮಾಡಲಾಗಿದೆ.
ಸುಮಾರು 11 ಪ್ರಕರಣಗಳಲ್ಲಿ ಆರೋಪಿಯಾಗಿರುವ ಮುರಡೇಶ್ವರದ ನ್ಯಾಶನಲ್ ಕಾಲೋನಿ ಮೊಹಮ್ಮದ್ ಇಟ್ಬಾಲ್ ತಂದೆ ಅಬ್ದುಲ್ ವದೂದ್ ಖಾಜಿ,20 ಪ್ರಕರಣದಲ್ಲಿ ಆರೋಪಿಯಾಗಿರುವ ,ಶಂಕರ್ ಸಂಕಪ್ಪ ನಾಯ್ಕ ಪಗಡಿ ಮನೆ ಕೆಬಿ ರಸ್ತೆ ಚೌಥನಿ, ಹಾಗೂ 9 ಪ್ರಕರಣದಲ್ಲಿ ಆರೋಪಿಯಾಗಿರುವ ಅಬ್ದುಲ್ ರೆಹಮಾನ ತಂದೆ ಶಬ್ಬಿರ ವಾಡ್ಕರ್ ಬದ್ರಿಯಾ ಕಾಲೋನಿ ಭಟ್ಕಳ ಇವರನ್ನು ಉತ್ತರಕನ್ನಡ ಜಿಲ್ಲೆಯಿಂದ ವಿಧಾನಸಭೆ ಚುನಾವಣೆ ಮುಗಿಯುವವರೆಗೆ ಬಳ್ಳಾರಿ ಜಿಲ್ಲೆಯ ಪರಮದೇವನಹಳ್ಳಿ (ಪಿ.ಡಿ. ಹಳ್ಳಿ) ಪೋಲಿಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ ಎಂದು ಸಹಾಯಕ ಆಯುಕ್ತ ಮಮತಾದೇವಿ,ಆದೇಶಿಸಿದ್ದಾರೆ