Suddibindu.in
Yallapur:ಯಲ್ಲಾಪುರ: ಬೈಕ್ ಓವರ್ ಟೇಕ್ ಮಾಡುವ ವಿಚಾರಕ್ಕೆ ಸಂಬಂಧಿಸಿ ನಡೆದ ಗಲಾಟೆ ನಡೆದು ಯುವಕ‌ನ ಕೊಲೆಯಲ್ಲಿ(Murder)ಅಂತ್ಯವಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹುಣಶೆಟ್ಟಿಕೊಪ್ಪದಲ್ಲಿ‌ ನಡೆದಿದೆ.

ಇದನ್ನೂ ಓದಿ : ಮಹಿಳೆಯರಿಂದಲ್ಲೆ ಮಹಿಳೆ ಮೇಲೆ ಹಲ್ಲೆ

ಪ್ರಜ್ವಲ್ ಎಂಬಾತನೆ ಕೊಲೆಯಾದ ಯುವಕನಾಗಿದ್ದಾನೆ. ಕೊಲೆಯಾದ ಪ್ರಜ್ವಲ್ ಹುಣಶೆಟ್ಟಿಕೊಪ್ಪ(Hunashettikoppa,)ಜಾತ್ರೆ ಮುಗಿಸಿ ಮನೆಗೆ ಬರುತ್ತಿರುವಾಗ ಬೈಕ್ (bike) ಓವರ್ ಟೇಕ್ ಮಾಡಿದಕ್ಕೆ ನಾಲ್ವರ ಯುವಕರ ಗುಂಪು ಪ್ರಜ್ವಲ್‌ಗೆ ರಸ್ತೆಯಲ್ಲಿ ಅಡ್ಡಗಟ್ಟಿ ಜಗಳಕ್ಕೆ ಇಳಿದಿದ್ದಾರೆ. ಈ ನಡುವೆ ಮಾತಿಗೆ ಮಾತು ಬೆಳೆದು ನಾಲ್ವರು ಯುವಕರು ಪ್ರಜ್ವಲ್‌ಗೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.ಕೊಲೆಯಾದ ಯುವಕ ಹಳಿಯಾಳ ಮೂಲದ ಪ್ರಜ್ವಲ್ ಪ್ರಕಾಶ ಕಕ್ಕೇರಿಕರ್ ಎಂಬುದು ಗೊತ್ತಾಗಿದೆ.

ಸಾಣಾ ಮರಾಠಿ, ನಾಗೇಶ್ ಪಾಟೀಲ್, ಪಾಂಡು ಮರಾಠಿ ಎಂಬುವವರೆ ಕೊಲೆ ಮಾಡಿರುವ ಆರೋಪಿಗಳಾಗಿದ್ದಾರೆ. ಕೊಲೆ‌ ನಡೆದ ಕೆಲವೇ ಹೊತ್ತಲ್ಲಿ ಕೊಲೆ ಮಾಡಿರುವ ಆರೋಪಿಗಳನ್ನ ಯಲ್ಲಾಪುರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ‌.