ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಶಿರೂರು ಗುಡ್ಡ ಕುಸಿತ ಘಟನೆಯಲ್ಲಿ ನಾಪತ್ತೆಯಾಗಿದ್ದ ಇಬ್ಬರಿಗಾಗಿ ನಡೆಸಲಾದ ಮೂರನೇ ಹಂತದ ಕಾರ್ಯಚರಣೆಯಲ್ಲಿ ಸಿಕ್ಕ ಎರಡು ಮೂಳೆಯ DNAವರದಿ ಲಭ್ಯವಾಗಿದ್ದು, ಪುರುಷರ ಮೂಳೆ ಎನ್ನುವುದು ಖಚಿವಾಗಿದೆ.ಆದರೆ ಅದು ಮಾನವನ ಮೂಳೆ ಎನ್ನುವುದಷ್ಟೆ ಖಚಿತವಾಗಿದೆ ಹೊರತು ಯಾರ ಮೂಳೆ ಎನ್ನುವುದು ಡಿಎನ್ಎ ವರದಿಯಲ್ಲಿ ದೃಢಪಟ್ಟಿಲ್ಲ.
ಶಿರೂರು ಗುಡ್ಡಕುಸಿತದಲ್ಲಿ ಜಗನ್ನಾಥ ಹಾಗೂ ಲೋಕೇಶ ಅವರ ಶವ ಪತ್ತೆಯಾಗದ ಕಾರಣ ಸಾಕಷ್ಟು ಕಾರ್ಯಚರಣೆ ನಡೆಸಿದ್ದರೂ ಸಹ ಕೊನೆ ತನಕ ಶವ ಪತ್ತೆಯಾಗಿರಲಿಲ್ಲ. ಆದರೆ ಮೂರನೇ ಹಂತದ ಕಾರ್ಯಚರಣೆಯಲ್ಲಿ ಎರಡು ಮೂಳೆಗಳು ಪತ್ತೆಯಾಗಿದ್ದು, ಬಳಿಕ ಉತ್ತರಕನ್ನಡ ಜಿಲ್ಲಾಡಳಿತ ಆ ಮೂಳೆಯನ್ನ ಡಿಎನ್ಎ ಪರೀಕ್ಷೆಗೆ ಕಳುಹಿಸಿತ್ತು..ಈಗ ಬಂದಿರುವ ವರದಿಯಲ್ಲಿಯೂ ಸಹ ಅಂದು ಸಿಕ್ಕ ಎರಡು ಮೂಳೆಗಳು ಮಾನವ ಮೂಳೆ ಎನ್ನುವುದು ಮಾತ್ರ ಗೊತ್ತಾಗಿದೆ.
ಅಂದು ಸಿಕ್ಕ ಮುಳೆಯಲ್ಲಿ ಯಾರ ಮೂಳೆ ಎನ್ನುವು ಬಗ್ಗೆ ಪರೀಕ್ಷೆ ಮಾಡುವಷ್ಟು ಅಂಶ ಆ ಮೂಳೆಯಲ್ಲಿ ಇಲ್ಲದೆ ಇರುವ ಕಾರಣ ಸಿಕ್ಕ ಮೂಳೆ ಇಂತಹವರದ್ದೆ ಎಂದು ಖಚಿತ ಪಡಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.ಈಗ ಮೂರು ತಿಂಗಳ ಬಳಿಕ ಬಂದ ವರದಿ ಸಿಕ್ಕಿದ್ದರು ಖಚಿತ ಮಾಡಲು ಸಾಧ್ಯವಾಗಿಲ್ಲ.
ಗಮನಿಸಿ