ಸುದ್ದಿಬಿಂದು ಬ್ಯೂರೋ
ಕುಮಟಾ
: ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಅಭ್ಯರ್ಥಿ ನಿವೇದಿತ್ ಆಳ್ವ ನಾಮಪತ್ರ ಸಲ್ಲಿಕೆಗೆ ಬಂದಿದ್ದ ಸಾವಿರಾರು ಕಾರ್ಯಕರ್ತರು ಮೆರೆವಣಿಗೆ ಮದ್ಯದಲ್ಲೆ ಶಾರದಾ ಶೆಟ್ಟಿ ಅವರ ಮನೆಗೆ ತೆರಳಿ ನಮ್ಮ ಬೆಂಬಲ ನಿಮ್ಮಗೆ ನಿಮ್ಮ ಜೊತೆ ನಾವಿದ್ದೆವೆ ಎಂದು ಹೇಳುವ ಮೂಲಕ ಶಾರದಾ ಶೆಟ್ಟಿಯವರಿಗೆ ಶಕ್ತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸದ ಟಿಕೇಟ್ ವಂಚಿತವಾಗಿ ಪಕ್ಷೇತರವಾಗಿ ಸ್ಪರ್ದಿಸಿರುವ ಮಾಜಿ ಶಾಸಕಿ ಶಾರದಾ ಶೆಟ್ಟಿ ತಮಗೆ ಆದ ಅನ್ಯಾಯಕ್ಕೆ ಮನೆಗೆ ಬಂದ ಕಾರ್ಯಕರ್ತರೆದುರೇ ಕಣ್ಣೀರಿಟ್ಟರು.ಇನ್ನು ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವ ವಿರುದ್ಧ ಕಾರ್ಯಕರ್ತರೇ ಅಸಮದಾನ ಗೊಂಡರೇ ಟಿಕೇಟ್ ನಿರೀಕ್ಷೆಯಲ್ಲಿದ್ದ ಮಾಜಿ ಶಾಸಕಿ ಪಕ್ಷೇತ್ರ ಸ್ಪರ್ದೆ ಮಾಡಿದರೇ,ಕಾಂಗ್ರೆಸ್ ನ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಶಿವಾನಂದ ಹೆಗಡೆ ಕಡತೋಕ ರವರು ಬಂಡಾಯವಾಗಿ ಸ್ಪರ್ಧೆಗೆ ಸಿದ್ಧವಾಗಿದ್ದಾರೆ.

ಸ್ಥಳೀಯರಿಗಿಂತ ಹೊರಗಿನಿಂದ ಬಂದವರೆ ಹೆಚ್ಚು

ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ಕ್ಷೇತ್ರದಲ್ಲಿನ ಕಾಂಗ್ರೆಸ್ ಕಾರ್ಯಕರ್ತರಿಗಿಂತ ಹೊರಗಿನಿಂದ ಬಂದ ಬಾಡಿಗೆ ಕಾರ್ಯಕರ್ತರೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿದ್ದು, ಶಿರಸಿ,ಭಟ್ಕಳ, ಹಾವೇರಿಯಿಂದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದಾರೆ ಎನ್ನಲಾಗಿದೆ.
.

ಮೆರವಣಿಗೆಯಲ್ಲಿ ಕೇಳಿಬರದ ಜೈ ಘೋಷ

ಈಗಾಗಲೇ ಇದೆ ಕ್ಷೇತ್ರದಲ್ಲಿ ನಡೆದ ಇನ್ನೂಳಿದ ಜೆಡಿಎಸ್ ಅಭ್ಯರ್ಥಿ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದು, ಆವೇಳೆ ಮೆರವಣಿಗೆಯಲ್ಲಿದ್ದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅಭ್ಯರ್ಥಿಗಳ ಹೆಸರನ್ನ ಹೇಳಿ ಮೆರವಣಿಗೆಯ ಉದ್ದಕ್ಕೂ ಜನಘೋಷವನ್ನ ಹಾಕಿದ್ದರು. ಆದರೆ ವಿಚಿತ್ರ ಎಂದರೆ ಇಂದು ನಡೆದ ಈ ಮೆರೆವಣಿಗೆಯಲ್ಲಿ ಯಾವಬ್ಬ ವ್ಯಕ್ತಿಯು ಅಭ್ಯರ್ಥಿ ಪರವಾಗಿಲಿ, ಪಕ್ಷದ ಪರ ಜೈ ಘೋಷಣೆ ಹಾಕಿರುವುದು ಕೇಳಿಬಂದಿಲ್ಲ. ಇದು ಒಂದು ರೀತಿಯಲ್ಲಿ ಮೌನ ಮೆರವಣಿಗೆ ಹಾಗೆ ಇತ್ತು ಎಂದು ಅನೇಕರು ಆಡಿಕೊಳ್ಳುವಂತಾಗಿದೆ.