ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ :ನಿವೃತ್ತಿ ಹೊಂದಿ ಆರು ತಿಂಗಳು ಕಳೆದು, ಅವರ ಮೇಲಿದ್ದ ಆರೋಪಗಳಿಗೆ ಹುರುಳಿಲ್ಲ ಎನ್ನುವ ಬಗ್ಗೆ ವಿಚಾರಣಾಧಿಕಾರಿಗಳು ಸರಕಾರಕ್ಕೆ ವರದಿ ಸಲ್ಲಿಕೆ ಮಾಡಿದ್ದರೂ ಸಹ ಸರಕಾರಿ ಇಲಾಖೆ ವಿಚಾರಣೆ ನೆಪದಲ್ಲಿ ನಿವೃತ್ತಿಯ ಯಾವುದೇ ಸೌಲಭ್ಯ ನೀಡದೆ ಕಿರುಕುಳ ಮಾಡಲಾಗುತ್ತಿದೆ ಎಂದು ಕುಮಟಾ ಡಯಟ್ನ ಪ್ರಥಮ ದರ್ಜೆಯ ನಿವೃತ್ತ ಸಹಾಯಕ ಉಲ್ಲಾಸ ತಿಮ್ಮಪ್ಪ ನಾಯ್ಕ ಆರೋಪಿಸಿದ್ದಾರೆ.
ಉಲ್ಲಾಸ ನಾಯ್ಕ ಇವರು ಕಳೆದ ಆರು ತಿಂಗಳ ಹಿಂದೆ ಸರಕಾರಿ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ಆದರೆ ಇವರು ನಿವೃತ್ತಿ ಹೊಂದಿದ್ದು ಅವರ ಮೇಲಿದ್ದ ಅರೋಪವನ್ನ ವಿಚಾರಣೆ ನಡೆಸಿದ ನಿವೃತ್ತ ಜಡ್ಡ್ ಅವರು ಉಲ್ಲಾಸ ನಾಯ್ಕ ಅವರ ಮೇಲೆನ ಆರೋಪ ಸತ್ಯಕ್ಕೆ ದೂರವಾಗಿದ್ದು ಎನ್ನುವ ಬಗ್ಗೆ ಈಗಾಲೇ ಸರಕಾರಕ್ಕೆ ವರದಿಯನ್ನ ಸಹ ನೀಡಿದ್ದಾರೆ. ಆದರೆ ಇವರ ಮೇಲಿದ್ದ ಆರೋಪಗಳು ಕಳೆದ ಆರು ತಿಂಗಳ ಹಿಂದೆ ಮುಕ್ತವಾಗಿದ್ದರು. ಸಹ ಇದುವರಗೆ ಅವರಿಗೆ ನೀಡಬೇಕಾದ ನಿವೃತ್ತಿ ಸೌಲಭ್ಯವನ್ನು ನೀಡದೆ ಸಂಬಂಧಿಸಿದ ಅಧಿಕಾರಿಗಳು ಉದೇಶ ಪೂರ್ವಕವಾಗಿ ಹಿಂಸೆ ಮಾಡುತ್ತಿರುವ ಬಗ್ಗೆ ಉಲ್ಲಾಸ ನಾಯ್ಕ ಅವರು ತಮ್ಮಗಾಗುತ್ತಿರುವ ಅನ್ಯಾಯವನ್ನ ತೊಡಿಕೊಂಡಿದ್ದಾರೆ.
ತನ್ನ ಮೇಲೆ ಇದ್ದ ಆರೋಪಗಳೆಲ್ಲವೂ ದೋಷಮುಕ್ತ ಆಗಿರುವ ಬಗ್ಗೆ ಎಲ್ಲಾ ದಾಖಲೆಗಳನ್ನ ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಕೆ ಮಾಡಿದ್ದರು ಸಹ ಅದನ್ನ ಸೂಕ್ತವಾಗಿ ಪರಿಗಣಿಸದೆ.ಆರು ತಿಂಗಳಿಂದ ತನ್ನ ಎಲ್ಲಾ ಸೌಲಭ್ಯಗಳನ್ನ ತಡೆ ಹಿಡಿದು ಅನಾವಶ್ಯಕವಾಗಿ ತೊಂದರೆ ನೀಡುತ್ತಿದ್ದಾರೆ. ಇದರಿಂದ ನಿತ್ಯವೂ ನನಗೆ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ನಷ್ಟ ಉಂಟುಮಾಡುತ್ತಿದ್ದು, ಇವರು ನೀಡುತ್ತಿರುವ ಹಿಂಸೆಯಿಂದಾಗಿ ಕುಟುಂಬ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ.ಹೀಗಾಗಿ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ನ್ಯಾಯ ಒದಗಿಸುವಂತೆ ಉಲ್ಲಾಸ ನಾಯ್ಕ ಈ ಮೂಲಕ ಕೇಳಿಕೊಂಡಿದ್ದಾರೆ.
ಗಮನಿಸಿ