suddibindu.in
ಗೋಕರ್ಣ : ಇಲ್ಲಿನ ರೆಸಾರ್ಟ್ ಒಂದರಲ್ಲಿ ಜೂಜಾಟ ಆಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ದಾಳಿ ನಡೆಸಿ ಒಂಬತ್ತು ಮಂದಿಯನ್ನ ಬಂಧಿಸಿ ಸಾವಿರಾರು ರೂಪಾಯಿ ನಗದು ಹಾಗೂ ಹಲವು ಕಾರುಗಳನ್ನ ವಶಕ್ಕೆ ಪಡೆದಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ದುಬ್ಬನ್ಸಸಿಯಲ್ಲಿರುವ ಸೀ ಸ್ಪ್ರೇ ರೆಸಾರ್ಟ್ ನಡೆದಿದೆ.

ದಾಳಿ ನಡೆಸಲಾಗಿರುವ ರೆಸಾರ್ಟ್ ಸುಧಾರಕರ್ ಎಂಬುವವರಿಗೆ ಸೇರಿದ್ದಾಗಿದ್ದು ಎಂದು ಗೊತ್ತಾಗಿದೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಉತ್ತರಕನ್ನಡ ಜಿಲ್ಲೆಗೆ ವರ್ಗಾವಣೆ ಆಗು ಬಂದ ಬಳಿಕ ಜಿಲ್ಲಾದ್ಯಂತ ಇರುವ ಎಲ್ಲಾ ಎಲ್ಲಾ ಕ್ಲಬ್‌ಗಳಿಗೆ ಕಡಿವಾಣ ಹಾಕಿದ್ದರು.ಹೀಗಾಗಿ ಜೂಜಾಟಗಾರರು ಕ್ಲಬ್ ಬಿಟ್ಟು ರೆಸಾರ್ಟ್‌ಗಳನ್ನೆ ಜೂಜಾಟದ ಅಡ್ಡ ಮಾಡಿಕೊಂಡಿದ್ದರು ಎನ್ನುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಈ ದಾಳಿ ನಡೆಸಲಾಗಿದೆ.

ಈ ರೆಸಾರ್ಟ್ ಮಾಲೀಕರು ಸಹ ಜೂಜಾಟದ ಬಾಗಿಯಾಗಿದ್ದರು ಎನ್ನಲಾಗಿದೆ. ಇವರ ಜೊತೆಯಲ್ಲಿ ಕುಮಟಾದ ಎರಡು ಕ್ಲಬ್ ಮಾಲೀಕರು ಸೇರಿ ಒಟ್ಟು 9 ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ.ದಾಳಿಯ ವೇಳೆ 75 ಸಾವಿರ ನಗದು ಹಾಗೂ ಲಕ್ಷಾಂತರ ಬೆಲೆಬಾಳುವ ಕಾರುಗಳನ್ನ ವಶಕ್ಕೆ ಪಡೆಯಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಕಾರಿ ಎಂ ನಾರಾಯಣ ಅವರ ಮಾರ್ಗದಲ್ಲಿ ಡಿವೈಎಸ್ಪಿ ಮಹೇಶ್,ಸಿಪಿಐ ತಿಮ್ಮಪ್ಪ ನಾಯ್ಕ ಹಾಗೂ ಸಿಬ್ಬಂದಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು. ಒಂದೇ ವಾರದಲ್ಲಿ ಹೊನ್ನಾವರ ಹಾಗೂ ಗೋಕರ್ಣದಲ್ಲಿ ದಾಳಿ ನಡೆಸಲಾಗಿದೆ.ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ