suddibindu.in
ಕಾರವಾರ : ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಈ ಹಿನ್ನಲೆಯಲ್ಲಿ ಇದೀಗ ಕಾರವಾರ ತಾಲೂಕಿನ ಬಿಣಗಾ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರ್ಮಿಸಲಾದ ಸುರಂಗ ಮಾರ್ಗದಲ್ಲಿ ಗುಡ್ಡಕುಸಿತ ಉಂಟಾಗಿ ವಾಹನ ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿದೆ.
ಬಿಣಗಾದಿಂದ ಕಾರವಾರಕ್ಕೆ ಸಂಚರಿಸುವ ಟನೆಲ್ ಬಳಿ ಗುಡ್ಡಕುಸಿತ ಉಂಟಾಗಿದೆ.ಸುರಂಗದ ಮೇಲ್ಭಾಗದಲ್ಲಿನ ಕಲ್ಲು ಮಣ್ಣು ಹೆದ್ದಾರಿಯಲ್ಲಿ ಬಿದ್ದಿದ್ದು,ವಅದೃಷ್ಟವಶಾತ್ ವಾಹನ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ವಾಹನ ಸಂಚಾರದ ಮಾರ್ಗ ಬದಲಾವಣೆ ಮಾಡಿದ್ದಾರೆ.
ಇದನ್ನೂ ಓದಿ
- Karnataka Cm DK Shivakumar /ಕರ್ನಾಟಕದ ಚುಕ್ಕಾಣಿ ಹಿಡಿದ ಕನಕಪುರ ಬಂಡೆ : ಕಿಂಗ್ಮೇಕರ್ ಈಗ ಕಿಂಗ್
- ಮೂರು ವರ್ಷದಲ್ಲೇ ಜನಪ್ರಿಯ ನಾಯಕನಾಗಿ ಹೊರಹೊಮ್ಮಿದ ಮಂಕಾಳ್ ವೈದ್ಯ
- ಮೊರಬಾದಲ್ಲಿ ಭಾರೀ ಗಾಳಿಗೆ ತೆಂಗಿನ ಮರ ಬಿದ್ದು ಮನೆ ಜಖಂ: ಪ್ರಾಣಾಪಾಯದಿಂದ ಪಾರು
ಮುನ್ನಚ್ಚರಿಕೆ ಕ್ರಮವಾಗಿ ಬಿಣಗಾ ಬಳಿ ಸುರಂಗಮಾರ್ಗದಲ್ಲಿ ವಾಹನ ಸಂಚಾರವನ್ನ ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಬಿಣಗಾದಿಂದ ಬೈತಖ್ಕೋಲ್ ಮೂಲಕ ವಾಹನ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಳೆ ಇದೇ ರೀತಿ ಮುಂದುವರೆದರೆ ಸುರಂಗ ಮಾರ್ಗದ ಬಳಿ ಇನ್ನೂ ಸಹ ಗುಡ್ಡಕುಸಿಯುವ ಸಾಧ್ಯತೆ ಇದೆ. ಸದ್ಯ IRB ಕಾರ್ಮಿಕರಿಂದ ಹೆದ್ದಾರಿಯಲ್ಲಿ ಬಿದ್ದ ಕಲ್ಲು ಮಣ್ಣು ತೆರವು ಮಾಡಲಾಗಿದೆ..




