suddibindu.in
ಕಾರರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜಿಲ್ಲೆಯಲ್ಲಿ ಅವಾಂತರ ಸೃಷ್ಠಿಯಾಗಿದೆ. ಭಾರೀ ಮಳೆಯಿಂದಾಗಿ ಶಿರಸಿ ಹಾಗೂ ಕಾರವಾರದಲ್ಲಿ ಗುಡ್ಡ ಕುಸಿತವಾಗಿದೆ.
ಭಾರೀ ಮಳೆಯಿಂದಾಗಿ ಕುಮಟಾ ಶಿರಸಿ ಹೆದ್ದಾರಿಯಲ್ಲಿ ದೇವಿ ಮನೆ ಬಳಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಇನ್ನೂ ಕಾರವಾರ ತಾಲೂಕಿನ ಕೈಗಾ ತೆರಳುವ ಕಡವಾಡ ಬಳಿ ಗುಡ್ಡ ಕುಸಿಯುತ್ತಿದ್ದು, ಮಂದ್ರಾಳಿ ಬಳಿ ಗುಡ್ಡು ಕುಸಿದು ಸಂಚಾರ ಬಂದ್ ಆಗಿದೆ.ಕಳೆದ ಎರಡು ದಶಕದ ಹಿಂದೆ ಕಡವಾಡದ ಜರಿವಾಡದಲ್ಲಿ ಗುಡ್ಡಕುಸಿತ ಉಂಟಾಗಿ ಹತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು..
ಇದನ್ನೂ ಓದಿ
- ದಿಕ್ಕು ತಪ್ಪಿದ ರಾಜ್ಯ ಬಿಜೆಪಿಗೆ (BJP) ಸಂಘ ಪರಿವಾರದ ಹೊಸ ಪ್ಲ್ಯಾನ್?
- ಸುಚಿತ್ರ ಸೌಂದರ್ಯಕ್ಕೆ ಸೋತ ಜ್ಯೋತಿಷಿ..? ಮೊದಲ ಭೇಟಿಯಲ್ಲೇ 35 ಸಾವಿರ ಸುರಿದ ಕಮಲಾಕರ ಭಟ್..!
- ಸುಚಿತ್ರಾ ಯಾರು? ಸುರೇಖಾ ಯಾರು? ವಸಂತ್ ನಾಯ್ಕ್ ಕೊಲೆ ಪ್ರಕರಣದಲ್ಲಿ ಸ್ಫೋಟಕ ಸತ್ಯಗಳು ಒಂದೊಂದಾಗಿ ಬಹಿರಂಗ!
ಪ್ರಯಾಣಿಕರು ಬಸ್ನಲ್ಲಿ ಲಾಕ್
ಹೊನ್ನಾವರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ವರ್ನಕೇರಿ ಬಳಿ ಘಟನೆ ಸಹ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿ ಹೊನ್ನಾವರ ಗೇರುಸೊಪ್ಪ, ಸಾಗರ ಹೆದ್ದಾರಿ ಬಂದ್ ಆಗಿದೆ. ಬೆಂಗಳೂರಿನಿಂದ ಹೊನ್ನಾರವ,ಕುಮಟಾ, ಭಾಗಕ್ಕೆ ಬರಬೇಕಾದ ಪ್ರಯಾಣಿಕರು ಬಸ್ಲ್ಲಿಯೇ ಲಾಕ್ ಆಗಿದ್ದಾರೆ.
ಮಳೆ ಅನಾಹುತದ ಕುರಿತಾಗಿ ಏನೆ ಸುದ್ದಿ ಇದ್ದರೂ 9916127361 ವಾಟ್ಸಾಪ್ ಮಾಡಿ ಮಾಹಿತಿ ನೀಡಿ…






