suddibindu.in
ಕಾರವಾರ :ಮನೆಯಲ್ಲಿ ಯಾರು ಇಲ್ಲದ ವೇಳೆ ಬೀಗ ಮುರಿದು ಮನೆಯಲ್ಲಿದ್ದ ಲಕ್ಷಾಂತರ ರೂ ನಗದು ಹಾಗೂ ಬಂಗಾರ ಕಳ್ಳತನ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಕೋಡಿಭಾಗದ ನಿವೃತ್ತ ಪೊಲೀಸ್ ಒಬ್ಬರ ಮನೆಯಲ್ಲಿ ನಡೆದಿದೆ.
ಕೋಡಿಭಾಗದ ಮಾರುತಿ ಅಪ್ಪು ನಾಯಕ ಅವರ ಮನೆ ಕಳ್ಳತವಾಗಿದೆ.ಇವರು ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಮುಂದಿನ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳ ಮನೆಯ ಕಪಾಟಿನಲ್ಲಿದ್ದ ಎರಡು ಲಕ್ಷ ನಗದು ಹಾಗೂ 15ತೊಲೆ ಬಂಗಾರ ಕಳ್ಳತನ ಮಾಡಲಾಗಿದೆ.
ಇದನ್ನೂ ಓದು
- ಆರೋಗ್ಯ ಸಚಿವ ಯು.ಟಿ. ಖಾದರ್ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿ: ಬೈಕ್ ಸವಾರ ಗಂಭೀರ ಗಾಯ
- ಜಿಲ್ಲಾಸ್ಪತ್ರೆ ಶಿರಸಿ ಬದಲಿಗೆ ಕುಮಟಾ ಸೂಕ್ತ
- ಹಾಸಿಗೆಯಲ್ಲಿ ಮಕ್ಕಳ ನಡುವೆ ನಾಗರಹಾವು..!
ಘಟನಾ ಸ್ಥಳಕ್ಕೆ ಶ್ವಾನ ದಳ ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.ಈ ಬಗ್ಗೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




