suddibindu.in
ಯಲ್ಲಾಪುರ : ಬಿಜೆಪಿಯ ಹಾಲಿ ಶಾಸಕ ಶಿವರಾಮ ಹೆಬ್ಬಾರ್ ಅವರ ಪುತ್ರ ವಿವೇಕ ಹೆಬ್ಬಾರ್ ಹಾಗೂ ಜಿ.ಪಂ ಸದಸ್ಯರು ಸೇರಿ ಸಾವಿರಾರು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ನಾಳೆ(ಗುರುವಾರ) ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದಾರೆ.
- ದಿಕ್ಕು ತಪ್ಪಿದ ರಾಜ್ಯ ಬಿಜೆಪಿಗೆ (BJP) ಸಂಘ ಪರಿವಾರದ ಹೊಸ ಪ್ಲ್ಯಾನ್?
- ಸುಚಿತ್ರ ಸೌಂದರ್ಯಕ್ಕೆ ಸೋತ ಜ್ಯೋತಿಷಿ..? ಮೊದಲ ಭೇಟಿಯಲ್ಲೇ 35 ಸಾವಿರ ಸುರಿದ ಕಮಲಾಕರ ಭಟ್..!
- ಸುಚಿತ್ರಾ ಯಾರು? ಸುರೇಖಾ ಯಾರು? ವಸಂತ್ ನಾಯ್ಕ್ ಕೊಲೆ ಪ್ರಕರಣದಲ್ಲಿ ಸ್ಫೋಟಕ ಸತ್ಯಗಳು ಒಂದೊಂದಾಗಿ ಬಹಿರಂಗ!
ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಅವರೇ ಶೀಘ್ರದಲ್ಲಿ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ ಎನ್ನುವ ಬಗ್ಗೆ ವ್ಯಾಪಕ ಚರ್ಚೆಯಾಗಿತ್ತು. ಆದರೆ ಇದೀಗ ಶಿವರಾಮ ಹೆಬ್ಬಾರ್ ಅವರ ಪುತ್ರ ಹಾಗೂ ಯಲ್ಲಾಪುರ ಕ್ಷೇತ್ರದ ಐದಕ್ಕೂ ಹೆಚ್ಚು ಜಿಲ್ಲಾಪಂಚಾಯತ ಸದಸ್ಯರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ.ವಿವೇಕ ಹೆಬ್ಬಾರ್ ಈ ವಾರದೊಳಗೆ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಹಾಗೂ ಸಿ ಎಂ ಸಿದ್ದರಾಮಯ್ಯ ಸಮಯದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ.
ನಾಳೆ ಬೆಳಿಗ್ಗೆ 10ಗಂಟೆಗೆ ಬನವಾಸಿಯಲ್ಲಿ ವಿವೇಕ್ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ.ಸಚಿವ ಮಂಕಾಳು ವೈದ್ಯ, ಹಾಗೂ ಕಾಂಗ್ರೆಸ್, ಪ್ರಮುಖರ ಸಮುಖದಲ್ಲಿ ವಿವೇಕ ಹೆಬ್ಬಾರ್ ಹಾಗೂ ಜಿಲ್ಲಾ ಪಂಚಾಯತ ಸದಸ್ಯರು ಹಾಗೂ ನೂರಾರು ಕಾರ್ಯಕರ್ತರು ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದಾರೆ.





